400+ ವಿದೇಶಿ ಪ್ರತಿನಿಧಿಗಳು ಬೆಂಗಳೂರಿನಲ್ಲಿ ಸೇವೆಗಳ ಜಾಗತಿಕ ಪ್ರದರ್ಶನ 2019 ಕ್ಕೆ ಅನುಗ್ರಹಿಸಿದ್ದಾರೆ

ಬೆಂಗಳೂರು, 26 ನವೆಂಬರ್: ಬೆಂಗಳೂರು ಅರಮನೆಯಲ್ಲಿ ಸೇವೆಗಳ ಕುರಿತ 3 ದಿನಗಳ ಜಾಗತಿಕ ಪ್ರದರ್ಶನಕ್ಕೆ ಇಂದು ಬೆಂಗಳೂರು ತೆರೆದುಕೊಂಡಿತು. ಈ ಶೃಂಗಸಭೆಯು ಸೇವಾ ಉದ್ಯಮವನ್ನು ಉತ್ತೇಜಿಸುವುದರ ಮೇಲೆ ಕೇಂದ್ರೀಕರಿಸುತ್ತದೆ ಮತ್ತು 12 ಚಾಂಪಿಯನ್ ಸೇವೆಗಳ ವಿಭಾಗಗಳನ್ನು ಗುರಿಪಡಿಸುತ್ತದೆ. 200 ಕ್ಕೂ ಹೆಚ್ಚು ಪ್ರದರ್ಶಕರು, 5 ಕೇಂದ್ರ ಸರ್ಕಾರಿ ಸಚಿವಾಲಯಗಳು, 2 ಭಾಗವಹಿಸುವ ರಾಜ್ಯಗಳು (ಯುಪಿ ಮತ್ತು ಕರ್ನಾಟಕ), 12 ಜ್ಞಾನ ಅಧಿವೇಶನಗಳು ಮತ್ತು 80 ತಜ್ಞರನ್ನು ಒಳಗೊಂಡ ಈ ಶೃಂಗಸಭೆಯಲ್ಲಿ, 55 ಭಾಗವಹಿಸುವ ದೇಶಗಳಿಂದ 421 ವಿದೇಶಿ ಖರೀದಿದಾರರನ್ನು ಮತ್ತು 1700 ಕ್ಕೂ ಹೆಚ್ಚು ಪ್ರತಿನಿಧಿಗಳನ್ನು ನೋಂದಾಯಿಸಿತು.

ಈ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ದೊಡ್ಡ ಮತ್ತು ಮಧ್ಯಮ ಕೈಗಾರಿಕಾ ಸಚಿವ ಶ್ರೀ ಜಗದೀಶ್ ಶೆಟ್ಟರ್ ಅವರೊಂದಿಗೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಮತ್ತು ರೈಲ್ವೆ ಸರ್ಕಾರದ ಗೌರವಾನ್ವಿತ ಸಚಿವ ಶ್ರೀ ಪಿಯೂಷ್ ಗೋಯಲ್ ಉದ್ಘಾಟಿಸಿದರು.

ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಅವರು ಮಾತನಾಡಿ, ಸರ್ಕಾರ ಜಾರಿಗೊಳಿಸಿರುವ ಮತ್ತು ರೂಪಿಸಿರುವ ಕಾರ್ಯತಂತ್ರಗಳು ಪಕ್ಕ ಸ್ಥಳೀಯ ಫ್ಲೇವರ್ ಅನ್ನು ಹೊಂದಿವೆ. ಆದರೆ, ಜಾಗತಿಕ ಮಟ್ಟಕ್ಕೆ ಹೋಗುವಂತಹ ಕಾರ್ಯತಂತ್ರಗಳಾಗಿವೆ. ಬಹುನಿರೀಕ್ಷಿತ ಕ್ಲಸ್ಟರ್ ಅಭಿವೃದ್ಧಿ ಯೋಜನೆಯನ್ನು 9 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸುವ ಮೂಲಕ ಅಲ್ಲಿನ ಉತ್ಪಾದನೆಗೆ ಅನುಗುಣವಾಗಿ ಕೈಗಾರಿಕೆಗಳನ್ನು ಸ್ಥಾಪಿಸಲು ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ತಿಳಿಸಿದರು.

ಹಲವಾರು ಜಿಲ್ಲೆಗಳಲ್ಲಿ ಸೇವಾ ಕ್ಲಸ್ಟರ್ ಗಳನ್ನು ಆರಂಭಿಸುವ ಯೋಜನೆ ಮತ್ತು ಆರೋಗ್ಯ & ಯೋಗಕ್ಷೇಮ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುವ ಯೋಜನೆಗಳ ಬಗ್ಗೆ ವಿವರಣೆ ನೀಡಿದ ಶೆಟ್ಟರ್ ಅವರು, ಯೋಗಕ್ಷೇಮ ನಗರವನ್ನು ಅಭಿವೃದ್ಧಿಪಡಿಸುವ ಯೋಜನೆ ಜಾರಿಯಲ್ಲಿದೆ ಎಂದರು.

ಇದರ ಮೂಲಕ ಸರ್ಕಾರದ ಮಹತ್ವಾಕಾಂಕ್ಷೆಯ ಆಯುಷ್, ನ್ಯಾಚುರೋಪತಿ ಮತ್ತು ಇತರೆ ಯೋಗಕ್ಷೇಮ ಸೇವೆಗಳನ್ನು ಒಂದೇ ಕಡೆ ದೊರೆಯುವಂತೆ ಮಾಡಲಾಗುತ್ತದೆ. ಸರ್ಕಾರವು ಡಿಜಿಟಲೀಕರಣಕ್ಕೆ ಒತ್ತು ನೀಡಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ಮೊಬೈಲ್ ಎಟಿಎಂ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರು ಮಾತನಾಡಿ, ಸೇವಾ ವಲಯದಲ್ಲಿ ಮತ್ತಷ್ಟು ಪ್ರಗತಿ ಸಾಧಿಸಲು ಕರ್ನಾಟಕಕ್ಕೆ ಈ ಜಿಇಎಸ್ 2019 ಒಂದು ಉತ್ತಮ ಅವಕಾಶವಾಗಿದೆ. ಸದ್ಯದಲ್ಲೇ ಹೊಸ ಮಾಹಿತಿ ತಂತ್ರಜ್ಞಾನ ನೀತಿಯನ್ನು ಪ್ರಕಟಿಸಲಿದ್ದೇವೆ. ಈ ನೀತಿಯ ಮೂಲಕ ಕರ್ನಾಟಕ ಆವಿಷ್ಕಾರ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಜಗತ್ತಿನ ಮೊದಲ ಆಯ್ಕೆಯಾಗಲಿದೆ ಎಂಬ ವಿಶ್ವಾಸ ನನಗಿದೆ ಎಂದರು.

ಕರ್ನಾಟಕ ಕೇವಲ ಮಾಹಿತಿ ತಂತ್ರಜ್ಞಾನವಷ್ಟೇ ಅಲ್ಲ, ಪ್ರವಾಸೋದ್ಯಮ, ಅನಿಮೇಷನ್ & ಗೇಮಿಂಗ್, ಆರೋಗ್ಯ, ಶಿಕ್ಷಣ ಸೇರಿದಂತೆ ಇನ್ನಿತರೆ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿರುವ ರಾಜ್ಯವಾಗಿದೆ ಮತ್ತು ಈ ಕ್ಷೇತ್ರಗಳ ಮತ್ತಷ್ಟು ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ ಎಂದು ಅವರು ಹೇಳಿದರು.

ದೇಶದ ಅತಿದೊಡ್ಡ ಅಂತಾರಾಷ್ಟ್ರೀಯ ಪ್ರದರ್ಶನಗಳಲ್ಲಿ ಒಂದಾಗಿರುವ ಈ ಸೇವಾ ಕ್ಷೇತ್ರದ ಪ್ರದರ್ಶನದ ಒಟ್ಟಾರೆ ಕಾರ್ಯಕ್ರಮವನ್ನು 19,000 ಚದರಡಿಗಳ ವಿಸ್ತೀರ್ಣದಲ್ಲಿ ಆಯೋಜಿಸಲಾಗಿದೆ. ಪ್ರದರ್ಶನದ ವಿಸ್ತೀರ್ಣ 4600 ಚದರಡಿಯಲ್ಲಿ ರೂಪಿಸಲಾಗಿದೆ. 211 ಪ್ರದರ್ಶಕರು ಇಲ್ಲಿದ್ದಾರೆ. ಎಲೆಕ್ಟ್ರಾನಿಕ್ಸ್, ಐಟಿ, ರೈಲ್ವೇಸ್, ಎಂಎಸ್‍ಎಂಇ, ಲಾಜಿಸ್ಟಿಕ್, ಅಂಚೆ ಸೇರಿದಂತೆ ಸರ್ಕಾರದ ಹಲವಾರು ಸಂಸ್ಥೆಗಳು ಈ ಪ್ರದರ್ಶನದಲ್ಲಿ ಪಾಲ್ಗೊಂಡಿವೆ.

ಆಯುಷ್ ಪ್ರವಾಸೋದ್ಯಮ, ನಾಗರಿಕ ವಿಮಾನಯಾನ, ವಸತಿ ಮತ್ತು ನಗರ ವ್ಯವಹಾರಗಳು, ದೂರಸಂಪರ್ಕ ಇಲಾಖೆಗಳೂ ಸಹ ಇದರಲ್ಲಿ ಭಾಗಿಯಾಗಿವೆ.

ಕಾರ್ಯಕ್ರಮದಲ್ಲಿ

  • ಶ್ರೀ ರಾಜೇಶ್ ಕುಮಾರ್ ಮೋದಿ, ಜಿಂಬಾಬ್ವೆ ಸರ್ಕಾರದ ಉಪ ಮಂತ್ರಿ (ವಾಣಿಜ್ಯ ಮತ್ತು ಕೈಗಾರಿಕೆ)
  • ಶ್ರೀ ಸುಧಂಶು ಪಾಂಡೆ, ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಕಾರ್ಯದರ್ಶಿ
  • ಶ್ರೀ ಟಿ.ಎಂ.ವಿಜಯ್ಭಾಸ್ಕರ್, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ
  • ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್, ದೆಹಲಿ ಹೈಕೋರ್ಟ್
  • ಶ್ರೀ ಅನುಪ್ ವಾಧ್ವಾನ್, ಭಾರತ ಸರ್ಕಾರದ ವಾಣಿಜ್ಯ ಕಾರ್ಯದರ್ಶಿ
  • ಶ್ರೀ ಮಾನೆಕ್‌ಡಾವರ್, ಉಪಾಧ್ಯಕ್ಷರು, ಸೇವೆಗಳ ರಫ್ತು ಉತ್ತೇಜನ ಮಂಡಳಿಯ
  • ಶ್ರೀ ವಿಕ್ರಮ್ ಕಿರ್ಲೋಸ್ಕರ್, ಅಧ್ಯಕ್ಷರು, ಸಿಐಐ
  • ಶ್ರೀ ಗೌರವ್ ಗುಪ್ತಾ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಸರ್ಕಾರ

ಮತ್ತು ಇನ್ನೂ ಅನೇಕಾರು ಭಾಗವಹಿಸಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ