ರಮೇಶ್ ಆತ್ಮಹತ್ಯೆ ಪ್ರಕರಣ-ಜ್ಞಾನಭಾರತಿ ಪೆÇಲೀಸರಿಂದ ತನಿಖೆ

Varta Mitra News

ಬೆಂಗಳೂರು,ಅ.28 – ಮಾಜಿ ಉಪಮುಖ್ಯಮಂತ್ರಿ ಡಾ ಜಿ. ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಞಾನಭಾರತಿ ಪೆÇಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆಗೆ ಸಹಕರಿಸುತ್ತಿಲ್ಲ ಎಂದು ತಿಳಿದುಬಂದಿದೆ.

ಇತ್ತೀಚೆಗೆ ಮಾಜಿ ಡಿಸಿಎಂ ಮನೆಗೆ ಮೇಲೆ ಐಟಿ ಇಲಾಖೆ ದಾಳಿ ನಡೆಸಲಾಗಿತ್ತು. ಈ ವೇಳೆ ಡಾ.ಜಿ.ಪರಮೇಶ್ವರ್ ಅವರ  ಆಪ್ತ ಸಹಾಯಕ ರಮೇಶ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಐಟಿ ವಿಚಾರಣೆಗೆ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರಮೇಶ್ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದರು.

ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡಿರುವ  ಜ್ಞಾನಭಾರತಿ ಠಾಣೆ ಪೆÇಲೀಸರು ರಮೇಶ್ ಆಪ್ತರನ್ನು ಹಾಗೂ ಮಾಜಿ ಡಿಸಿಎಂ ಪರಮೇಶ್ವರ್  ಅವರ ಕೆಲವು ಆಪ್ತರನ್ನು ತನಿಖೆಗೊಳಪಡಿಸಿದ್ದರು.  ಈ ಕಾರಣಕ್ಕೆ ರಮೇಶ್ ಮನೆಗೆ ಐಟಿ ಅಧಿಕಾರಿಗಳು ತೆರಳಿದ್ದ ದೃಶ್ಯ ವೈರಲ್‍ಲಾಗಿತ್ತು.

ನಂತರ ಐಟಿ ಇಲಾಖೆಗೆ ಜ್ಞಾನಭಾರತಿ ಪೆÇಲೀಸರು ನೋಟಿಸ್ ಜಾರಿ ಮಾಡಿ ರಮೇಶ್ ನಿವಾಸಕ್ಕೆ ಯಾಕೆ ತೆರಳಿದ್ದೀರಿ? ಆ ಸಮಯದಲ್ಲಿ ರಮೇಶ್ ನಿವಾಸದಲ್ಲಿ ನಡೆದಿದ್ದಾದರೂ ಏನು..? ಇದಕ್ಕೆ ಸಮರ್ಪಕ ಉತ್ತರ ನೀಡಿ ಎಂದು ಐಟಿಯನ್ನು ಪ್ರಶ್ನಿಸಲಾಗಿತ್ತು.ಆದರೆ ನೋಟಿಸ್ ನೀಡಿ ಹತ್ತು ದಿನ ಕಳೆದರೂ ಐಟಿ ಉತ್ತರ ನೀಡದೆ ಇರುವುದು ತನಿಖೆಗೆ ಕೊಂಚ ಹಿನ್ನೆಡೆಯಾಗಿದೆ ಎಂದು ಹೇಳಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ