ಬಿಗ್ ಬಾಸ್ ಮನೆಯ ಸದಸ್ಯರು ಭಾವುಕರಾಗುವಂತೆ ಗಳಗಳನೆ ಅತ್ತ ರವಿ ಬೆಳಗೆರೆ

ಬೆಂಗಳೂರು: ರವಿ ಬೆಳಗೆರೆ ಓರ್ವ ಖಡಕ್​ ವ್ಯಕ್ತಿ. ಅವರು ಬರವಣಿಗೆ ಮೂಲಕ ಸಾಕಷ್ಟು ಜನರಿಗೆ ಸ್ಫೂರ್ತಿಯಾಗಿದ್ದಾರೆ. ಬೆಳ್​ ಬೆಳಗ್ಗೆ ಬೆಳಗೆರೆ ಎನ್ನುವ ಕಾರ್ಯಕ್ರಮದ ಮೂಲಕ ಕಾಂಗ್ರೆಸ್​ ಹಿರಿಯ ನಾಯಕ ಡಿಕೆ ಶಿವಕುಮಾರ್​ ಸೇರಿ ಅನೇಕರ ವಿರುದ್ಧ ನೇರವಾಗಿ ಹರಿಹಾಯ್ದಿದ್ದಾರೆ. ಅವರ ಖಡಕ್​ ಹೇಳಿಕೆ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಆದರೆ, ಅವರಲ್ಲೊಂದು ಮುಗ್ಧ ಮನಸ್ಸಿದೆ, ತಾಯಿಯನ್ನು ದೇವತೆಯಂತೆ ಕಾಣುವ ವ್ಯಕ್ತಿ ಅವರು ಎಂಬುದು ಅನಾವರಣಗೊಂಡಿದ್ದು ಬಿಗ್ ಬಾಸ್​ ಮನೆಯಲ್ಲಿ.

ಹೌದು, ಬಿಗ್​ ಬಾಸ್​ ಮನೆಯಲ್ಲಿ ನಿನ್ನೆ ತಾಯಿ ಅಥವಾ ತಂದೆ ಬಗ್ಗೆ ಹೇಳಿಕೊಳ್ಳಬೇಕು ಎನ್ನುವ ಆದೇಶ ಬಂದಿತ್ತು. ಅಂತೆಯೇ ಎಲ್ಲರೂ ಒಂದು ಹಾಡನ್ನು ಹೇಳಿ ತಮ್ಮ ತಮ್ಮ ಪಾಲಕರ ಬಗ್ಗೆ ಹೇಳಿಕೊಂಡಿದ್ದರು. ಈ ವೇಳೆ ರವಿ ಬೆಳಗೆರೆ ಕೂಡ ತಮ್ಮ ತಾಯಿ ಬಗ್ಗೆ ಹೇಳಿಕೊಂಡಿದ್ದಾರೆ.
ರವಿ ಬೆಳಗೆರೆಗೆ ತಂದೆ ಇರಲಿಲ್ಲ. ಅವರು ತಾಯಿಯಲ್ಲೇ ತಂದೆ-ತಾಯಿಯನ್ನು ಕಂಡವರು. ಅವರು ತಾಯಿಯನ್ನು ದೇವರಂತೆ ಕಂಡವರು. ತಾಯಿಯ ಸೇವೆಯನ್ನು ಯಾವ ರೀತಿ ಮಾಡಿದ್ದೇನೆ, ತಾಯಿಯನ್ನು ಹೇಗೆ ಕಂಡಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ಈ ವೇಳೆ ಅವರು ತುಂಬಾನೇ ಭಾವುಕರಾದರು, ಅತ್ತರು. ರವಿ ಬೆಳಗೆರೆ ಅವರು ಅತ್ತಿದ್ದನ್ನು ನೋಡಿ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ನಿನ್ನೆಯ ಬಿಗ್​ ಬಾಸ್​ ಎಪಿಸೋಡ್​ನಲ್ಲಿ ಬಹುತೇಕರು ಅತ್ತಿದ್ದಾರೆ. ಹೀಗಾಗಿ ನಿನ್ನೆಯ ಎಪಿಸೋಡ್​ ತುಂಬಾನೇ ಭಾವುಕವಾಗಿತ್ತು. ವೀಕ್ಷಕರು ಕೂಡ ಕಣ್ಣೀರು ಹಾಕಿದ್ದರು.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ