ವಿಶ್ವಸಂಸ್ಥೆ ಮಹಾ ಅಧಿವೇಶನದಲ್ಲಿ ಮುತ್ಸದ್ಧಿ ಮೋದಿ, ಇಮ್ರಾನ್‌ ಉಗ್ರಾವತಾರ

ನ್ಯೂಯಾರ್ಕ್ : ವಿಶ್ವಸಂಸ್ಥೆಯ 74ನೇ ಮಹಾಧಿವೇಶನದಲ್ಲಿ ಶುಕ್ರವಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಮಾಡಿದ ಭಾಷಣಗಳು ಆಯಾ ದೇಶ ಮತ್ತು ಅದರ ನಾಯಕರ ವ್ಯಕ್ತಿತ್ವವನ್ನು ತೆರೆದಿಟ್ಟಿತು. ನರೇಂದ್ರ ಮೋದಿ ಅವರು ಭಯೋತ್ಪಾದನೆ ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ ಕರೆ ನೀಡುತ್ತಲೇ ಶಾಂತಿ, ಅಭಿವೃದ್ಧಿ ಮಂತ್ರ ಪಠಿಸಿ ಮುತ್ಸದ್ಧಿತನ ಮೆರೆದರು. ಅದರ ಬಳಿಕ ಮಾತನಾಡಿದ ಇಮ್ರಾನ್‌ ಖಾನ್‌ರ ಯುದ್ಧೋನ್ಮಾದಿ ಭಾಷೆ ‘ರಕ್ತಸಿಕ್ತ’ವಾಗಿತ್ತು. ಜತೆಗೆ ಮೋದಿ ಹಾಗೂ ಆರೆಸ್ಸೆಸ್‌ ಮೇಲೆ ‘ಉಗ್ರ’ ದಾಳಿಯನ್ನು ನಡೆಸಿದರು. ಮೋದಿ ಅವರು ‘ಪಾಕಿಸ್ತಾನದ ವಿಷಯ’ವನ್ನು ಮೀರಿ ನಿಂತು ವಿಶ್ವ ವೇದಿಕೆಯ ಗೌರವ ಕಾಪಾಡಿದರೆ, ಇಮ್ರಾನ್‌ ಖಾನ್‌ ‘ಕಾಶ್ಮೀರದಲ್ಲಿರಕ್ತಪಾತ’ದ ಎಚ್ಚರಿಕೆ ನೀಡಿದರು.

ಮೋದಿಯ ಬುದ್ಧ ಧ್ಯಾನ: ”ಭಾರತವು ಜಗತ್ತಿಗೆ ನೀಡಿದ ಸಂದೇಶ ಯುದ್ಧವಲ್ಲ, ಬದಲಾಗಿ ಬುದ್ಧನ ಶಾಂತಿ. ಹಾಗಾಗಿಯೇ ಶಾಂತಿಯನ್ನು ಕದಡುವ ಭಯೋತ್ಪಾದನೆಯ ವಿರುದ್ಧ ದೇಶದ ಆಕ್ರೋಶ ಸಾತ್ವಿಕವಾದದ್ದು. ಮನುಕುಲದ ಮಹಾ ಸವಾಲಾಗಿರುವ ಭಯೋತ್ಪಾದನೆಯ ದಮನಕ್ಕಾಗಿ ಇಡೀ ಜಗತ್ತೇ ಒಂದಾಗಬೇಕು,” ಎಂದು ಮೋದಿ ಕರೆ ನೀಡಿದರು. ಪ್ಲಾಸ್ಟಿಕ್‌ ಮುಕ್ತ ದೇಶ, ಮಹಾತ್ಮಾ ಗಾಂಧಿ ಅವರ 150ನೇ ಜನ್ಮದಿನಾಚರಣೆಯೂ ಸೇರಿದಂತೆ ಭಾರತದ ಸಾಧನೆಗಳು, ಅಭಿವೃದ್ಧಿ ಹೊಸ ಶಕೆಯನ್ನು ತೆರೆದಿಟ್ಟರು, ವಿವೇಕಾನಂದರು, ಜಾಗತಿಕ ಸತ್ಯಗಳ ಧ್ಯಾನ ಮಾಡಿದರು.

ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಇಂದು ‘ನಮೋ’ ಮೇನಿಯಾ
ಸಮಯಪ್ರಜ್ಞೆ ಮರೆತ ಇಮ್ರಾನ್
ಸಮರೋನ್ಮಾದದ ಭಾಷಣ ಮಾಡಿದ ಇಮ್ರಾನ್‌ ನಿಗದಿತ ಗರಿಷ್ಠ 20 ನಿಮಿಷಗಳ ಕಾಲಾವಕಾಶ ಮೀರಿ 50 ನಿಮಿಷ ಮಾತನಾಡಿದರು. ಮೋದಿ ಅವರು 15ರಿಂದ 20 ನಿಮಿಷಗಳ ಪರಿಮಿತಿ ಅರಿತು 17 ನಿಮಿಷಗಳಷ್ಟೇ ಮಾತನಾಡಿದರು.

ಮೋದಿ ಭಾಷಣದಲ್ಲಿ ಏನಿತ್ತು?
1. ಭಯೋತ್ಪಾದನೆ ವಿರುದ್ಧ ದನಿ
2. ವಿವೇಕಾನಂದ, ಬುದ್ಧ ಧ್ಯಾನ
3. ಗಾಂಧಿಯ 150ನೇ ಜನ್ಮ ದಿನ
4. ಭಾರತದ ಅಭಿವೃದ್ಧಿ ಪರ್ವ

ಇಮ್ರಾನ್ಭಾಷಣದಲ್ಲಿಏನಿತ್ತು?
1. ಕಾಶ್ಮೀರದಲ್ಲಿ ರಕ್ತಪಾತ ಎಚ್ಚರಿಕೆ
2. ಮೋದಿ, ಆರೆಸ್ಸೆಸ್‌ ಮೇಲೆ ದಾಳಿ
3. ಇಸ್ಲಾಮೋಫೋಬಿಯಾದ ಭಯ
4. ಅಣ್ವಸ್ತ್ರ ಸಮರದ ಧ್ಯಾನ

17 ನಿಮಿಷಗಳ ಹಿಂದಿ ಭಾಷಣಕ್ಕೆ ಸದಸ್ಯರು ಫುಲ್‌ ಫಿದಾ
2014ರ ಬಳಿಕ ವಿಶ್ವಸಂಸ್ಥೆಯಲ್ಲಿ2ನೇ ಬಾರಿ ಮೋದಿ ಹವಾ
ಹೆಸರು ಹೇಳದೆಯೇ ಪಾಕ್‌ನ ಉಗ್ರ ಮುಖ ಅನಾವರಣ

ಮೋದಿ ಉಗ್ರ ಪ್ರಹಾರ
* ಭಯೋತ್ಪಾದನೆ ಎನ್ನುವುದು ಒಂದು ದೇಶಕ್ಕಲ್ಲ, ಜಗತ್ತಿಗಷ್ಟೇ ಅಲ್ಲ, ಮನುಕುಲಕ್ಕೇ ಮಹಾ ಸವಾಲು.
* ಭಯೋತ್ಪಾದನೆ ವಿಷಯದಲ್ಲಿಸದಸ್ಯ ರಾಷ್ಟ್ರಗಳ ನಡುವೆಯೇ ಒಮ್ಮತವಿಲ್ಲದಿರುವುದು ವಿಶ್ವ ಸಂಸ್ಥೆ ಸ್ಥಾಪನೆಯ ಮೂಲ ತತ್ವಾದರ್ಶಕ್ಕೇ ಹೊಡೆತ.
* ಎಲ್ಲರೀತಿಯ ಭಯೋತ್ಪಾದನೆ, ಆಶ್ರಯ, ಹಣಕಾಸು ನೆರವು, ಬೆಂಬಲ ನೀಡುವುದನ್ನು ಅಪರಾಧ ಎಂದು ಸಾರಬೇಕೆಂದು ಪ್ರಸ್ತಾಪಿಸಿದ ಕರಡು ದಾಖಲೆಯೊಂದನ್ನು ಭಾರತ 1996ರಲ್ಲೇ ಜಿನೇವಾ ಅಧಿವೇಶನದಲ್ಲಿಪ್ರಸ್ತುತಪಡಿಸಿತ್ತು. ಆದರೆ, ಅದರ ಬಗ್ಗೆ ಇನ್ನೂ ಸಹಮತ ಮೂಡಿಲ್ಲ.


ವಿಶ್ವಕ್ಕೆ ಹೊಸ ದಾರಿ ದೀಪ ಭಾರತ

ಇಮ್ರಾನ್ಅವತಾರ
* ನಿಷೇಧಾಜ್ಞೆ ಹಿಂದೆಗೆದ ಕೂಡಲೇ ಕಾಶ್ಮೀರದಲ್ಲಿರಕ್ತಪಾತವಾಗಲಿದೆ. ಆಗ ಭಾರತ ಪಾಕ್‌ನತ್ತ ಕೈ ತೋರಲಿದೆ.
* ಹಿಟ್ಲರ್‌ ಮತ್ತು ಮುಸಲೋನಿಯ ಸ್ಫೂರ್ತಿಯಿಂದ ಹುಟ್ಟಿದ ಮುಸ್ಲಿಂ ವಿರೋಧಿ ಆರೆಸ್ಸೆಸ್‌ನ ಅಜೀವ ಸದಸ್ಯ ಮೋದಿ.
* ಭಾರತಕ್ಕಿಂತ 7 ಪಟ್ಟು ಸಣ್ಣದಾಗಿರುವ ಪಾಕ್‌ ಮುಂದೆ ಯುದ್ಧ ಮತ್ತು ಶರಣಾಗತಿಯ ಆಯ್ಕೆ ಇಟ್ಟರೆ ನಾವು ಯುದ್ಧವನ್ನೇ ಆರಿಸುತ್ತೇವೆ.
* ಅಣ್ವಸ್ತ್ರಶಕ್ತ ರಾಷ್ಟ್ರಗಳ ನಡುವಿನ ಯುದ್ಧದ ಪರಿಣಾಮವನ್ನು ಇಡೀ ಜಗತ್ತು ಅನುಭವಿಸಬೇಕಾಗುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ