ಎಲ್ಲೆಡೆ ಗೌರಿ-ಗಣೇಶ ಹಬ್ಬದ ಸಿದ್ಧತೆ

ಬೆಂಗಳೂರು, ಸೆ.1-ನಗರ ಸೇರಿದಂತೆ ಎಲ್ಲೆಡೆ ಗೌರಿ-ಗಣೇಶ ಹಬ್ಬದ ಸಿದ್ಧತೆ ಭರ್ಜರಿಯಾಗಿ ನಡೆದಿದೆ. ಪ್ರಮುಖ ರಸ್ತೆಗಳಲ್ಲಿ, ಮೈದಾನಗಳಲ್ಲಿ ಗೌರಿ-ಗಣೇಶ ಮೂರ್ತಿಗಳನ್ನು ಖರೀದಿಸುವಲ್ಲಿ ಸಾರ್ವಜನಿಕರು ಬ್ಯುಸಿಯಾಗಿರುವುದು ಕಂಡು ಬಂದಿತು.
ಈ ಬಾರಿ ಪಿಒಪಿ ಗೌರಿ-ಗಣೇಶ ಮೂರ್ತಿಗಳನ್ನು ನಿಷೇಧಿಸಿರುವುದರಿಂದ ಮಣ್ಣಿನ ಮೂರ್ತಿಗಳು ಹೆಚ್ಚಾಗಿ ಕಾಣುತ್ತಿದ್ದರೂ ಅಲ್ಲಲ್ಲಿ ಬಣ್ಣ ಗಣೇಶ ಮೂರ್ತಿಗಳನ್ನು ಮಾರಾಟಕ್ಕೆ ಇಡಲಾಗಿದೆ.
ಕೆಲವೆಡೆ ಸಾರ್ವಜನಿಕರೇ ಖುದ್ದಾಗಿ ತಮಗೆ ಬಣ್ಣದ ಮೂರ್ತಿಗಳೇ ಬೇಕೆಂದು ಬೇಡಿಕೆ ಇಟ್ಟಿದ್ದರಿಂದ ಅನಿವಾರ್ಯವಾಗಿ ಸ್ವಲ್ಪಮಟ್ಟಿಗೆ ಪಿಒಪಿ ಗೌರಿ-ಗಣೇಶ ಮೂರ್ತಿಗಳನ್ನು ಮಾರಾಟಕ್ಕೆ ಇಟ್ಟಿದ್ದೇವೆ ಎಂದು ಹೆಸರು ಹೇಳಲು ಇಚ್ಛಿಸಿದ ವ್ಯಾಪಾರಗಾರರು ಹೇಳಿದ್ದಾರೆ.
ಏನೆಯಾಗಲಿ ಕಳೆದ ವರ್ಷಕ್ಕಿಂತ ಈ ಬಾರಿ ಗಣನೀಯವಾಗಿ ಪಿಒಪಿ ಗೌರಿ-ಗಣೇಶಗಳು ಕಡಿಮೆಯಾಗಿರುವುದಂತೂ ನಿಜ.
ರಸ್ತೆ ಬದಿಗಳಲ್ಲಿ ಬಾಳೆಕಂದು, ಮಾವಿನಸೊಪ್ಪು, ಹೂ-ಹಣ್ಣು, ಬಾಗಿನದ ಮೊರ ಮತ್ತಿತರ ವಸ್ತುಗಳ ಖರೀದಿ ಭರಾಟೆ ನಡೆದಿದೆ.
ಪ್ರವಾಹದಿಂದಾಗಿ ಸ್ವಲ್ಪಮಟ್ಟಿಗೆ ಬೆಲೆ ಏರಿಕೆಯಾಗಿದ್ದರು, ವರಮಹಾಲಕ್ಷ್ಮಿ ಹಬ್ಬದ ಸಮಯದಲ್ಲಿದಷ್ಟೇ ಈಗಲೂ ದರ ಇದೆ.
ಸೇವಂತಿಗೆ ಮಾರು 100-200 ರೂ.
ಬಿಡಿಗುಲಾಬಿ 8-12ರೂ.
ಗುಲಾಬಿ ಕೆಜಿ 160-180ರೂ.
ಮಲ್ಲಿಗೆ ಕೆಜಿ 600-800 ರೂ.
ಕನಕಾಂಬರ 800-1000 ರೂ.
ಸುಗಂಧ ರಾಜ 120-200 ರೂ.
ಕಾಕಡ ಹೂ 400-500 ರೂ.
ಗರಿಕೆಗೆ ಕಟ್ಟು 10 ರಿಂದ 20 ರೂ., ಎಕ್ಕದ ಹಾರ 30 ರಿಂದ 50ರೂ., ಬಾಳೆಕಂದು ಜೋಡಿಗೆ 30 ರಿಂದ 70ರೂ.ನಂತೆ ಮಾರಾಟವಾಗುತ್ತಿದೆ.
ಹಣ್ಣು ಕೆಜಿ
ಸೇಬು 110-150ರೂ.
ಏಲ್ಲಕ್ಕಿ ಬಾಳೆ 100-120ರೂ.
ಪಚ್ಚಬಾಳೆ 30-40 ರೂ.
ಮೂಸಂಬಿ 30-100ರೂ.
ಸೀಬೆ 100-130 ರೂ.
ಸಪೆÇೀಟಾ 100-130ರೂ.
ಸೀತಾಫಲ 100-120ರೂ.
ತರಕಾರಿ ಕೆಜಿಗೆ
ಬೀನ್ಸ್ 50- 70ರೂ.
ಸೌತೆ 40ರೂ.
ಕ್ಯಾರೆಟ್ 60-80ರೂ.
ಕ್ಯಾಪ್ಸಿಕಮ್ 80ರೂ.
ಈರುಳ್ಳಿ 40-50 ರೂ.
ಬೆಲೆ ಏರಿಕೆಯಾಗಲಿ ಬಿಡಲಿ ಸಂಪ್ರದಾಯದ ಹಬ್ಬಗಳನ್ನು ಬಿಡಲಿಕ್ಕಾಗುವುದಿಲ್ಲ, ಸಂಭ್ರಮದಿಂದಲೇ ಗೌರಿ-ಗಣೇಶ ಹಬ್ಬವನ್ನು ಆಚರಿಸುತ್ತೇವೆ ಎಂದು ಬಹಳಷ್ಟು ಮಂದಿ ತಮ್ಮ ಅನಿಸಿಕೆ ಹಂಚಿಕೆಕೊಂಡಿದ್ದಾರೆ.
ಬೆಂಗಳೂರಿನಲ್ಲಿ ದರ ಮೇಲ್ಕಂಡಂತೆ ಇದ್ದರೆ ಜಿಲ್ಲೆ ಹಾಗೂ ತಾಲೂಕು ಸ್ವಲ್ಪಮಟ್ಟದಲ್ಲಿ ದರ ಹೆಚ್ಚಾಗಿಯೇ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ