ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಯಲ್ಲಿ ಮೈಸೂರು ರಾಜಮನೆತನದವರ ಭಾವಚಿತ್ರವನ್ನು ತಪ್ಪದೆ ಹಾಕಬೇಕು-ಸಚಿವ ವಿ.ಸೋಮಣ್ಣ

ಮೈಸೂರು, ಆ.26- ದಸರಾ ಸಂದರ್ಭದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಯಲ್ಲಿ ಮೈಸೂರು ರಾಜಮನೆತನದವರ ಭಾವಚಿತ್ರವನ್ನು ತಪ್ಪದೆ ಹಾಕಲು ಸೂಚಿಸಲಾಗಿದೆ.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರ ಈ ಸೂಚನೆ ಮೇರೆಗೆ ಅರಮನೆಗೆ ಗಜಪಡೆಗೆ ಸ್ವಾಗತ ಕೋರುವ ಇಂದಿನ ಆಹ್ವಾನ ಪತ್ರಿಕೆಯಲ್ಲಿ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಜಯಚಾಮರಾಜೇಂದ್ರ ಒಡೆಯರ್ ಅವರ ಭಾವಚಿತ್ರ ಪ್ರಕಟಿಸಲಾಗಿದೆ.
ಇಂದಿನ ಈ ಆಹ್ವಾನ ಪತ್ರಿಕೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಚಿಹ್ನೆ ಹಾಗೂ ಅರಮನೆ ಮಂಡಳಿ ಚಿಹ್ನೆಯೊಂದಿಗೆ ನಾಡಿಗೆ ಗಣನೀಯ ಕೊಡುಗೆ ನೀಡಿದ ಅರಸರ ಭಾವಚಿತ್ರವನ್ನು ಪ್ರಕಟಿಸಲಾಗಿದೆ.

ಕಳೆದ ವರ್ಷ ಮೈಸೂರಿನ ಅರಸರ ಭಾವಚಿತ್ರವನ್ನು ಯಾವುದೇ ದಸರಾ ಕಾರ್ಯಕ್ರಮದಲ್ಲಿ ಬಳಸದ ಹಿನ್ನೆಲೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ದಸರಾ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಯಲ್ಲಿ ಅಳವಡಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ