ಎಂ.ಡಿ. ಆಯಾಜ್‍ಖಾನಗೆ ಜನಸೇವಾ ಸದ್ಭಾವಾನಾ ಪ್ರಶಸ್ತಿ ಪ್ರದಾನ

ಬೀದರ, ಆಗಷ್ಟ. 23ಃ ನ್ಯೂ ದೆಹಲಿಯ ಎಕೋನಾಮಿಕ್ಸ್ ಗ್ರೋಥ್ ಸೂಸೈಟಿ ಆಫ್ ಇಂಡಿಯಾದಿಂದ ಬೀದರ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ನಗರದ ನೂರ್ ಏಜ್ಯುಕೇಷನಲ್ ಟ್ರಸ್ಟ ಅಧ್ಯಕ್ಷರಾದ ಎಂ.ಡಿ. ಆಯಾಜ್‍ಖಾನ ಅವರಿಗೆ ಜನಸೇವಾ ಸದ್ಭಾವಾನಾ ಪ್ರಶಸ್ತಿಯನ್ನು ಗೋವಾದ ಹೋಟಲ್ ತಾಜ್ ವಿವಾಂತದಲ್ಲಿ ಆಗಷ್ಟ 21 ರಂದು ನಡೆದ ಸಮಾರಂಭದಲ್ಲಿ ನ್ಯೂ ದೆಹಲಿಯ ಎಕೋನಾಮಿಕ್ಸ್ ಗ್ರೋಥ್ ಸೂಸೈಟಿ ಆಫ್ ಇಂಡಿಯಾದ ಅಧ್ಯಕ್ಷರಾದ ಎಸ್.ಕೆ. ಶರ್ಮಾ ಅವರು ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಗೋರ್ಮೆಂಟ್ ಆಫ್ ಇಂಡಿಯಾದ ಫಾರ್ಮರ್ ಡೈರಕ್ಟರ್ ಆಫ್ ಸಿ.ಬಿ.ಐ./ಸಿ.ಎಫ್.ಎಸ್.ಎಲ್.ಎಂ.ಎಚ್.ಎ. ಐಂಡ್ ಮೆಂಬರ್ ಆಫ್ ಇಂಟರ್‍ಪೋಲ್ ಅಧಿಕಾರಿ ವಿ.ಎನ್. ಸೆಹಗಲ್, ಗೋವಾದ ಡೆಪ್ಯೂಟಿ ಸ್ಪೀಕರ್ ಅನಂತ ವಿ. ಶೆಟ್, ವಿಜಯ ಪೌಲ್, ವಿ.ಪಿ. ಮಯ್ಮಾರ್, ನ್ಯಾಷನಲ್ ಕೌನ್ಸಿಲ್ ಆಫ್ ಎಂ.ಎಸ್.ಎಂ.ಇ. ಚೇರಮನ್ ಮಂಗೂರೇಷ ಪೈ ಪಾರ್ಕರ್, ವಲ್ರ್ಡ್ ಇನ್ವಾರ್‍ಮೆಂಟ್ ಮ್ಯಾನೇಜಮೆಂಟ್ ಸರ್ವಿಸ್ ಅಸೋಸಿಯೇಟ್ ಇನ್ಸ್‍ಟೇಕ್ಟರ್ ಕೌನ್ಸಲರ್ ಯುನಿಟೇಡ್ ಕಿಂಗಡಮ್‍ನ ಗ್ಯಾರಿ ಡಿ. ಲಾ ಪೋಮರಾಯಿ ಅವರು ಸೇರಿದಂತೆ ಇತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ