ವಾಣಿಜ್ಯ ಮಂಡಳಿಯಿಂದ ಸಂತ್ರಸ್ತರಿಗೆ 25 ಲಕ್ಷ ದೇಣಿಗೆ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ನೆರೆ ಹಾವಳಿಗೆ ತುತ್ತಾಗಿರುವ ಸಂತ್ರಸ್ತರಿಗೆ 25 ಲಕ್ಷಗಳನ್ನು ಮುಖ್ಯ ಮಂತ್ರಿ ಪರಿಹಾರ ನಿಧಿಗೆ ನೀಡಲಾಗುವುದೆಂದು ಅಧ್ಯಕ್ಷರಾದ ಜೈರಾಜ್ ಮಾದ್ಯಮದವರಿಗೆ ತಿಳಿಸಿದರು. ಇದೇ ಸಂದರ್ಭದಲ್ಲಿ 2018-19ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ವಿಭಾಗದಿಂದ ಕನ್ನಡ ಚಿತ್ರಗಳಿಗೆ 13 ಪ್ರಶಸ್ತಿ ಬಂದ ವಿಜೇತರಿಗೆ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಿ ಗೌರವಿಸಿತು. ಮಾಜಿ ಅಧ್ಯಕ್ಷರುಗಳಾದ ಸಾರಾ.ಗೋವಿಂದು, ಎಸ್.ಎ.ಚಿನ್ನೆಗೌಡ, ಪದಾದಿಕಾರಿಗಳು ಉಪಸ್ತಿತರಿದ್ದರು. ಒಂದಲ್ಲಾ ಎರಡಲ್ಲ ನಿರ್ದೇಶಕ ಸತ್ಯಪ್ರಕಾಶ್, ನಿರ್ಮಾಪಕ ಉಮಾಪತಿ, ಬಾಲಕಲಾವಿದ ರೋಹಿತ್, ನಟ,ನಿರ್ದೇಶಕ ರಿಶಬ್‍ಶೆಟ್ಟಿ, ಕೆಜಿಎಫ್ ನಿರ್ಮಾಪಕರ ಪರವಾಗಿ ಚಿದಾನಂದ, ಸಾಹಸ ನಿರ್ದೇಶಕರುಗಳಾದ ಅನ್ಬುಅರಿವು ಮುಂತಾದವರು ಗೌರವವನ್ನು ಸ್ವೀಕರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ