ತನಿಖೆಯನ್ನು ಸಿಬಿಐಗೆ ವಹಿಸಿರುವುದು ಒಳ್ಳೆಯ ಕೆಲಸ-ಸಂಸದೆ ಸುಮಲತಾ ಅಂಬರೀಶ್

ಮಂಡ್ಯ, ಆ.18- ಪೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ನೀಡಿರುವುದರಿಂದ ಇದರ ಹಿಂದೆ ಇರುವವರು ಬೆಳಕಿಗೆ ಬರುತ್ತಾರೆ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪೋನ್ ಕದ್ದಾಲಿಕೆ ಬಗ್ಗೆ ಅನುಮಾನವಿತ್ತು.ಈಗ ಇದರ ತನಿಖೆಯನ್ನು ಸಿಬಿಐಗೆ ವಹಿಸಿರುವುದು ಒಳ್ಳೆಯ ಕೆಲಸ ಎಂದು ಅಭಿಪ್ರಾಯಪಟ್ಟರು.

ನಮ್ಮ ಪೋನ್ ಕದ್ದಾಲಿಕೆ ಕುರಿತಂತೆಯೂ ನಮಗೆ ಅನುಮಾನ ಬಂದಿತ್ತು.ನಾವು ಈ ಮೊದಲೇ ಈ ಬಗ್ಗೆ ದೂರು ನೀಡಿದ್ದೆವು. ಸಿಬಿಐ ತನಿಖೆ ನಡೆಯುವುದರಿಂದ ಇದರ ಹಿಂದೆ ಇರುವವರ ಪತ್ತೆಯಾಗಲಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ