ಅದೃಷ್ಟದ ರೂಂ ಖಾಲಿ ಮಾಡಿದ ಮಾಜಿ ಸಿಎಂ ಕುಮಾರಸ್ವಾಮಿ

ಬೆಂಗಳೂರು,ಆ.16- ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ ಅದೃಷ್ಟದ ರೂಂ ಖಾಲಿ ಮಾಡಿ ತಮ್ಮ ನಿವಾಸಕ್ಕೆ ಶಿಫ್ಟ್ ಆಗಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ ಮೈತ್ರಿ ಸರ್ಕಾರದ ಅವಧಿಯಲ್ಲಿ ಸಿಎಂ ಆಗಿದ್ದ ವೇಳೆ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಉಳಿದುಕೊಳ್ಳುವುದಕ್ಕೆ ಬಿಜೆಪಿ ಟೀಕೆ ಮಾಡಿತ್ತು. ಆಗ ಹೆಚ್ಡಿಕೆ, ನಾನು ಗುಡಿಸಲಿನಲ್ಲಿ ಕೂಡ ಬದುಕಬಲ್ಲ, ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ರೂಂ ಮಾಡಿರುವುದು ವ್ಯಾಪಾರಕ್ಕಲ್ಲ. ಅದು ಅದೃಷ್ಟದ ರೂಂ, ಹೀಗಾಗಿ ನಾನು ಅಲ್ಲಿ ಕುಳಿತುಕೊಳ್ಳಲು ಇಚ್ಚಿಸುತ್ತೇನೆ ಎಂದು ಹೇಳಿದ್ದರು.

ಇದೀಗ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಾಜ್ ವೆಸ್ಟೆಂಡ್ ಹೋಟೆಲ್ ನ ಐಷಾರಾಮಿ ರೂಂ ಖಾಲಿ ಮಾಡಿದ್ದಾರೆ.ಅಧಿಕಾರ ಕಳೆದುಕೊಂಡ ಬಳಿಕವೂ ರೂಮಿನಲ್ಲಿ ಇರುತ್ತಿದ್ದ ಹೆಚ್ಡಿಕೆ, ಇಂದು ರೂಂ ಖಾಲಿ ಮಾಡಿ ಜೆಪಿ ನಗರದ ತಮ್ಮ ನಿವಾಸಕ್ಕೆ ಶಿಫ್ಟ್ ಆಗಿದ್ದಾರೆ.
ಆ ರೂಂ ತಮ್ಮ ಅದೃಷ್ಟದ ರೂಂ ಎಂದು ಹೇಳಿಕೊಂಡಿದ್ದ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಆಪ್ತರ ಜೊತೆ ಚರ್ಚೆ ನಡೆಸಲು, ಮಹತ್ವದ ಮೀಟಿಂಗ್ ನಡೆಸಲು ಇದೇ ರೂಂ ಬಳಸುತ್ತಿದ್ದರು.ಸಿಎಂ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ತಾಜ್ ವೆಸ್ಟೆಂಡ್ ರೂಂನಲ್ಲಿ ವಾಸವಾಗಿದ್ದರು.

10 ಕೋಟಿ ದೇಣಿಗೆ ನೀಡಿದ ಸಂಸ್ಥೆ ಹೆಸರು ನೆರೆಪೀಡಿತ ಗ್ರಾಮಕ್ಕೆ ನಾಮಕರಣ; ರಾಜ್ಯವನ್ನು ಮಾರಾಟಕ್ಕೆ ಇಡಬೇಡಿ ಎಂದ ಜೆಡಿಎಸ್‍ಈ ಹಿಂದೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಹೆಚ್.ಡಿ.ಕುಮಾರಸ್ವಾಮಿ, ‘ನಾನು 2018ರ ವಿಧಾಸಭಾ ಚುನಾವಣೆಯ ಫಲಿತಾಂಶವನ್ನು ತಾಜ್ ವೆಸ್ಟೆಂಡ್ ಹೋಟೆಲಿನ ರೂಂನಲ್ಲಿ ಕುಳಿತು ಟಿವಿಯಲ್ಲಿ ವೀಕ್ಷಿಸುತ್ತಿದ್ದೆ.ಅದೇ ಸಮಯದಲ್ಲಿ ಗುಲಾಂ ನಬಿ ಅಜಾದ್ ಕರೆ ಮಾಡಿ ನಾನೇ ಸಿಎಂ ಆಗಬೇಕೆಂದು ಮನವಿ ಮಾಡಿದರು.
ಬಳಿಕ ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆಸಿ ಸಮ್ಮಿಶ್ರ ಸರ್ಕಾರ ರಚಿಸಲಾಯಿತು. ಹೀಗಾಗಿ, ಈ ರೂಂ ನನಗೆ ಅದೃಷ್ಟ ತಂದುಕೊಟ್ಟ ರೂಂ.ಆದ್ದರಿಂದ ನಾನು ಇಲ್ಲೇ ವಾಸವಾಗಿದ್ದೇನೆ ಎಂದು ಹೇಳಿದ್ದರು.

ಅಧಿಕಾರ ಹೋದ 22 ದಿನಗಳ ಬಳಿಕ ತಾಜ್ ವೆಸ್ಟೆಂಡ್ ಹೋಟೆಲ್ನ ಐಷಾರಾಮಿ ರೂಮನ್ನು ಖಾಲಿ ಮಾಡಿದ್ದಾರೆ.ಲಕ್ಷಾಂತರ ರೂ ಕೊಟ್ಟು ಐಷಾರಾಮಿ ಹೋಟೆಲ್ನಲ್ಲಿ ಇರುವ ಬಗ್ಗೆ ಟೀಕಿಸಿದ್ದ ಬಿಜೆಪಿ ನಾಯಕರಿಗೆ ಉತ್ತರ ನೀಡಿದ್ದ ಹೆಚ್.ಡಿ. ಕುಮಾರಸ್ವಾಮಿ, ಆ ಹೋಟೆಲ್ ರೂಮಿನ ವೆಚ್ಚವನ್ನು ಸ್ವಂತ ಹಣದಿಂದ ಭರಿಸುವುದಾಗಿ ಸ್ಪಷ್ಟಪಡಿಸಿದ್ದರು. ಅಧಿಕಾರ ಹೋದಮೇಲೂ ಕೆಲವು ದಿನಗಳ ಕಾಲ ಅದೇ ರೂಮಿನಲ್ಲಿ ಇರುತ್ತಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಇಂದು ರೂ ಖಾಲಿ ಮಾಡಿ ಜೆಪಿ ನಗರದ ತಮ್ಮ ನಿವಾಸಕ್ಕೆ ಶಿಫ್ಟ್ ಆಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ