ವರ್ಷಾಂತ್ಯದಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನಲೆ-ರಾಜಕೀಯ ಪಕ್ಷಗಳಲ್ಲಿ ಆರಂಭವಾದ ಪಕ್ಷಾಂತರ ಪರ್ವ

ಮುಂಬೈ, ಜು.30- ಈ ವರ್ಷಾಂತ್ಯದಲ್ಲಿ ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುನ್ನವೇ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ.

ಕಾಂಗ್ರೆಸ್ ಮತ್ತು ಎನ್‍ಸಿಪಿಯ ನಾಲ್ವರು ಶಾಸಕರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ನಾಳೆ ಬಿಜೆಪಿ ಸೇರಲಿದ್ದಾರೆ.

ಕಾಂಗ್ರೆಸ್‍ನ ಕಾಳಿದಾಸ ಕೊಳಂಬಕರ್, ಎನ್‍ಸಿಪಿಯ ಶಿವೇಂದ್ರ ಸಿನ್ಹ ಬೋಂಸ್ಲೆ, ವೈಭವ್ ಪಿಚಾರ್ಡ್ ಮತ್ತು ಸಂದೀಪ್ ನಾಯಕ್ ಅವರು ತಮ್ಮ ರಾಜೀನಾಮೆ ಪತ್ರಗಳನ್ನು ವಿಧಾನಸಭಾದ್ಯಕ್ಷ ಹರಿಬಾಬು ಬಾಗಡೆ ಅವರಿಗೆ ಸಲ್ಲಿಸಿದ್ದಾರೆ. ನಾಳೆ ಈ ನಾಲ್ವರು ಬಿಜೆಪಿ ಸೇರುವ ನಿರೀಕ್ಷೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ