ಕಾರ್ಯಾಚರಣೆಗಾಗಿ ರಕ್ಷಣಾ ಪಡೆಯ ನೌಕೆ

ನವದೆಹಲಿ,ಜು.30- ಕಣ್ಮರೆಯಾಗಿರುವ ಕೆಫೆ ಕಾಫಿ ಡೇ ಸಂಸ್ಥಾಪಕ ಮತ್ತು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ ಸಿದ್ದಾರ್ಥ್ ಅವರ ಪತ್ತೆಗಾಗಿ ಭಾರತೀಯ ಕರಾವಳಿ ರಕ್ಷಣಾ ಪಡೆಯ ನೌಕೆಯೊಂದು ಹಳೇಮಂಗಳೂರು ಬಂದರಿನತ್ತ ತೆರಳಿದ್ದು ಶೋಧ ಕಾರ್ಯಾಚರಣೆಗೆ ನೆರವಾಗಲಿದೆ.

ಈ ಕುರಿತು ಇಂದು ಮಧ್ಯಾಹ್ನ ಕರಾವಳಿ ರಕ್ಷಣಾ ಪಡೆ ಪ್ರಕಟಣೆ ಮೂಲಕ ಈ ವಿಷಯ ತಿಳಿಸಿದೆ. ಈ ನೌಕೆಯೊಂದಿಗೆ ಮುಳುಗು ತಜ್ಞರ ಮೂರು ಪ್ರತ್ಯೇಕ ತಂಡಗಳು ಸಹ ಶೋಧ ಕಾರ್ಯಾಚರಣೆಯಲ್ಲಿ ತೊಡಗಲಿವೆ.

ಈಗಾಗಲೇ ಮಂಗಳೂರು ಕರಾವಳಿ ಪ್ರದೇಶದಲ್ಲಿ ಸಿದ್ದಾರ್ಥ್‍ಗಾಗಿ ತೀವ್ರ ಶೋಧ ಮುಂದುವರೆದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ