ಅವಸರಕ್ಕೆ ಕಾನೂನು ಮೀರಿ ನಡೆಯಲು ಆಗುವುದಿಲ್ಲ-ಸ್ಪೀಕರ್ ರಮೇಶ್‍ಕುಮಾರ್

ಬೆಂಗಳೂರು, ಜು.22-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿರುವ ವಿಶ್ವಾಸ ಮತಯಾಚನೆ ಮೇಲಿನ ನಿರ್ಣಯದ ಚರ್ಚೆಯನ್ನು ಇಂದೇ ಮುಕ್ತಾಯ ಮಾಡಲು ಎಲ್ಲರೂ ಒಪ್ಪಿದ್ದಾರೆ ಎಂದು ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತ ಪಕ್ಷದ ನಾಯಕರು, ಮುಖಂಡರು ಇಂದೇ ಮುಕ್ತಾಯ ಮಾಡಲು ಒಪ್ಪಿದ್ದಾರೆ. ಇಂದೇ ವಿಶ್ವಾಸಮತಯಾಚನೆಯ ಪ್ರಕ್ರಿಯೆ ಮುಗಿಯಬೇಕೆಂಬುದು ಸಭೆಯ ತೀರ್ಮಾನವೂ ಆಗಿದೆ ಎಂದರು.
ನಿಯಮಾವಳಿ ಪ್ರಕಾರ ವಿಧಾನಸಭೆ ಕಲಾಪವನ್ನು ನಡೆಸಲಾಗುತ್ತಿದೆ. ಕಾನೂನಿನ ಅರಿವಿಲ್ಲದವರು ಏನೋ ಮಾತನಾಡುತ್ತಾರೆ. ಅವಸರಕ್ಕೆ ಕಾನೂನು ಮೀರಿ ನಡೆಯಲು ಆಗುವುದಿಲ್ಲ. ರಾಜೀನಾಮೆ ನೀಡಿರುವ ಶಾಸಕರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ