ಪತ್ನಿಯನ್ನು ಪರ್ವತದಿಂದ ನೂಕಿ ಕೊಲೆ ಮಾಡಿದ ಪತಿ

ಮುಂಬೈ, ಜು.17– ನಾಗತಿಹಳ್ಳಿ ಚಂದ್ರಶೇಖರ್ ಅವರ ಕಥೆ, ಚಿತ್ರಕಥೆ ಮತ್ತು ನಿರ್ದೇಶನದ ಕನ್ನಡದಲ್ಲಿ ಬಿಡುಗಡೆಯಾದ `ಬಾ ನಲ್ಲೆ ಮಧುಚಂದ್ರಕೆ’ ಚಿತ್ರ ಸೂಪರ್ ಹಿಟ್ ಆಗಿತ್ತು.

ಕ್ರೈಂ-ಸಸ್ಪೆನ್ಸ್ ಚಿತ್ರ ಅನೈತಿಕ ಸಂಬಂಧದ ಕಥೆಯಾಗಿದ್ದು, ಹನಿಮೂನ್ ಹೆಸರಲ್ಲಿ ಪತ್ನಿಯನ್ನು ಕರೆದುಕೊಂಡು ಹೋದ ಪತಿ ಪರ್ವತದ ಮೇಲಿನಿಂದ ಆಕೆಯನ್ನು ತಳ್ಳಿ ಕೊಲೆ ಮಾಡಿದ್ದ. ಇದೀಗ ಇದೇ ರೀತಿಯ ಅಪರಾಧವೊಂದನ್ನು ನಿಜ ಜೀವನದಲ್ಲಿ ಪತಿಯೊಬ್ಬ ಮಾಡಿದ್ದಾನೆ.

ಮಧ್ಯಪ್ರದೇಶ ಮೂಲದ ಬಾಬುಲಾಲ್ ಕೇಲ್ ಪತ್ನಿಯನ್ನು ಮಹಾರಾಷ್ಟ್ರದ ನಾಸಿಕ್‍ನಲ್ಲಿರುವ ಸಪ್ತಶೃಂಗಿ ದೇವಾಲಯಕ್ಕೆ ಕರೆದುಕೊಂಡು ಬಂದಿದ್ದಾನೆ. ದೇವರ ದರ್ಶನದ ಬಳಿಕ ನಂದೂರಿ ಪರ್ವತ ಶಿಖರಕ್ಕೆ ಬಂದಿದ್ದಾರೆ. ಅಲ್ಲಿ ಇಬ್ಬರ ನಡುವೆ ಜಗಳವಾಗಿದ್ದು, ಕೋಪದಲ್ಲಿ ಆಕೆಯನ್ನು ಪರ್ವತದಿಂದ ತಳ್ಳಿ ಕೊಲೆ ಮಾಡಿದ್ದಾನೆ.

ಬಾಬುಲಾಲ್ ತನ್ನ ಪತ್ನಿಯನ್ನು ಪರ್ವತದಿಂದ ತಳ್ಳುತ್ತಿದ್ದುದ್ದನ್ನು ಸ್ಥಳೀಯರೊಬ್ಬರು ನೋಡಿ ಕೂಡಲೇ ಅಲ್ಲಿದ್ದ ಕೆಲ ಯಾತ್ರಾರ್ಥಿಗಳಿಗೆ ಎಚ್ಚರಿಕೆ ನೀಡಿ ಆತನನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿದ್ದಾರೆ.

ಸದ್ಯ ಪೋಲೀಸರು ಕವಿತಾಳ ಮೃತದೇಹವನ್ನು ಕಣಿವೆಯಿಂದ ವಶಪಡಿಸಿಕೊಂಡಿದ್ದು, ಬಾಬುಲಾಲ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ