ಏಳೆಂಟು ಮಂದಿ ಅತೃಪ್ತ ಶಾಸಕರು ವಾಪಸಾಗಲಿದ್ದಾರೆ-ಸಚಿವ ಜಮೇರ್ ಆಹಮದ್‍ಖಾನ್

ಬೆಂಗಳೂರು, ಜು.8- ಸಂಜೆವರೆಗೂ ಕಾದು ನೋಡಿ.ಏಳೆಂಟು ಮಂದಿ ಅತೃಪ್ತ ಶಾಸಕರು ವಾಪಸಾಗಲಿದ್ದಾರೆ.ಸಮಸ್ಯೆ ಬಗೆಹರಿಯಲಿದೆ ಎಂದು ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಎಲ್ಲಾ ಕೆಲಸಕ್ಕೂ ರೆಡಿ. ಅವರ ಯಾವುದೇ ಆದೇಶವನ್ನು ಪಾಲಿಸುತ್ತೇನೆ. ಮುಂಬೈಗೆ ಹೋಗಿ ಅತೃಪ್ತರನ್ನು ಕರೆ ತನ್ನಿ ಎಂದರೂ ಹೋಗುತ್ತೇನೆ. ಸದ್ಯದ ಪರಿಸ್ಥಿತಿ ಹೇಗಿದ್ದರೂ ಎಲ್ಲಾ ಸಮಸ್ಯೆ ಬಗೆಹರಿಯಲಿದೆ ಎಂದರು.

ಬಿಜೆಪಿ ಸರ್ಕಾರ ಪತನಕ್ಕೆ ನೇರವಾಗಿ ಕೈ ಹಾಕಿದೆ. ಆದರೂ ಯಶಸ್ವಿಯಾಗಲ್ಲ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಶಾಸಕರು ವಾಪಸ್ ಬರುತ್ತಾರೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ