ಚಾಣಕ್ಯ, ಬಸವಣ್ಣನ ನೀತಿ, ಉರ್ದು ಶಾಯಿರಿ ಉಲ್ಲೇಖಿಸಿ ಬಜೆಟ್ ಭಾಷಣ ಆರಂಭಿಸಿದ ವಿತ್ತ ಸಚಿವೆ

ಹೊಸದಿಲ್ಲಿಎನ್‌ಡಿಎ ಸರಕಾರದ ಎರಡನೇ ಅವಧಿಯ ಮೊದಲ ಬಜೆಟ್ ಮಂಡಿಸುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಚಾಣಕ್ಯ ಮತ್ತು ಕಾಯಕ ಯೋಗಿ ಬಸವಣ್ಣನ ನೀತಿ ಮತ್ತು ಉರ್ದು ಶಾಯಿರಿ (ಯಕೀನ್ ಹೋ ತೋ ಕೊಯಿ ರಾಸ್ತಾ ನಿಕಲ್ತಾ ಹೈ, ಹವಾ ಕಿ ಓಟ್‌ ಬಿ ಲೇ ಕರ್‌ ಚಿರಾಗ್‌ ಜಲ್ತಾ ಹೈ) ಉಲ್ಲೇಖಿಸಿ ಭಾಷಣ ಆರಂಭಿಸಿದರು.

ಕಾಯಕಯೋಗಿ ಬಸವಣ್ಣನ ಕಾಯಕವೇ ಕೈಲಾಸ ದಾಸೋಹದಡಿ ಕೌಶಲ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ ಎಂದರು.

ಮುದ್ರಾ ಯೋಜನೆ ಮೂಲಕ ಜನಸಾಮಾನ್ಯರ ಜೀವನದಲ್ಲಿ ಬದಲಾವಣೆ. ವಿಶ್ವದಲ್ಲಿಯೇ ಭಾರತ 6ನೇ ಆರ್ಥಿಕ ದೇಶವಾಗಿ ಬೆಳೆದಿದ್ದು, ಖರೀದಿ ಶಕ್ತಿ ಇರುವ ಮೂರನೇ ರಾಷ್ಟ್ರವಾಗಿದೆ. ಬಲಿಷ್ಠ ದೇಶ, ಬಲಿಷ್ಠ ನಾಗರಿಕ ನಮ್ಮ ಗುರಿ ಎಂದು ಹೇಳಿದರು.

ಸಾಗರ್ ಮಾಲಾ, ಭಾರತ್ ಮಾಲಾ ಮೂಲಕ ಸಾರಿಕೆ ಕ್ಷೇತ್ರಕ್ಕೆ ಕೊಡುಗೆ ನೀಡಲಾಗಿದ್ದು, ಸಾರಿಗೆ ವೆಚ್ಚ ಕಡಿಮೆಗೊಳಿಸುವ ನಿಟ್ಟಿನಲ್ಲಿ ಈ ಯೋಜನೆಗಳನ್ನು ಜಾರಿಗೊಳಿಸಲಾಗಿದೆ.

ಎಲೆಕ್ಟ್ರಿಕ್ ವಾಹನ ಖರೀದಿಗೆ ಪ್ರೋತ್ಸಾಹ ಧನ ಘೋಷಿಸಿದ ಸಚಿವೆ, 300 ಕಿ.ಮೀ. ಮೆಟ್ರೋ ಯೋಜನೆಗೆ ಅನುಮೋದನೆ ನೀಡಿದರು.

ಭಾರತ ಈಗ ಸೂಪರ್‌ ದೇಶವಾಗುವತ್ತ ಸಾಗಿದೆ. ಇದಕ್ಕಾಗಿ ನಾವು 5 ಟ್ರಿಲಿಯನ್‌ ಅಮೆರಿಕನ್‌ ಡಾಲರ್ ಆರ್ಥಿಕತೆಯ ಗುರಿ ಹೊಂದಿದ್ದೇವೆ. ಇದನ್ನು ಸಾಗಿಸುವತ್ತ ಹೆಜ್ಜೆ ಕೂಡ ಇಡಲಾಗಿದೆ. ಪ್ರಸಕ್ತ ವರ್ಷವೇ ನಾವು 3 ಟ್ರಿಲಿಯನ್‌ ಅಮೆರಿಕನ್‌ ಡಾಲರ್‌ ಆರ್ಥಿಕತೆಯ ದೇಶವಾಗಿ ಹೊರಹೊಮ್ಮಲಿದ್ದೇವೆ ಎಂದು ಸಚಿವರು ಭಾಷಣದಲ್ಲಿ ವಿವರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ