ಕಾಂಗ್ರೇಸ್ ಪಕ್ಷ ಮುಳುಗುತ್ತಿರುವ ಹಡಗು-ಬಿಜೆಪಿ ಶಾಸಕ ಮಾಧುಸ್ವಾಮಿ

ಬೆಂಗಳೂರು, ಜು.2- ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗಾಗಿದ್ದು, ಅದನ್ನು ಹತ್ತಲು ಯಾರಾದರೂ ಹೋಗುತ್ತಾರೆಯೇ ಎಂದು ಬಿಜೆಪಿ ಶಾಸಕ ಮಾದುಸ್ವಾಮಿ ಪ್ರಶ್ನಿಸಿದರು.

ರಿವರ್ಸ್ ಆಪರೇಷನ್ ಮಾಡುವ ಪ್ರಯತ್ನದ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಅವರು, ಮುಳುಗುತ್ತಿರುವ ಕಾಂಗ್ರೆಸ್ ಹಡಗಿಗೆ ತೂತು ಬಿದ್ದು ಒಂದೂವರೆ ತಿಂಗಳೇ ಕಳೆದಿದೆ. ಹೀಗಾಗಿ ನಮ್ಮ ಶಾಸಕರಾರೂ ಕಾಂಗ್ರೆಸ್ ಕಡೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮೈತ್ರಿ ಸರ್ಕಾರದ ತೆಪ್ಪ ಯಾವಾಗ ಮುಳುಗುತ್ತೋ ಗೊತ್ತಿಲ್ಲ. ಈ ತೆಪ್ಪದಲ್ಲಿ ಕೋತಿ ಕೂತ ಹಾಗಿದೆ. ಕೋತಿಗಳು ಈ ಕಡೆ ಆ ಕಡೆ ಆದರೆ ತಕ್ಷಣ ತೆಪ್ಪ ಮುಳುಗುತ್ತದೆ. ಅದು ಯಾವಾಗ ಮುಳುಗುತ್ತದೆ ಎಂದು ಹೇಳಲು ಆಗುವುದಿಲ್ಲ. ಆದರೆ, ತೆಪ್ಪ ಮುಳುಗುವುದಂತೂ ನಿಶ್ಚಿತ ಎಂದು ಟೀಕಾಪ್ರಹಾರ ನಡೆಸಿದರು.
ನಾವು ಯಾವ ಆಪರೇಷನ್ ಕೂಡ ಮಾಡುತ್ತಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ