ಕ್ಯಾನ್ಸರ್ ರೋಗಿಗಳಿಗೆ ಉಚಿತ ಆಯುರ್ವೇದ ಔಷಧಿ

ಬೆಂಗಳೂರು, ಜೂ.25- ಎಲ್ಲಾ ರೀತಿಯ ಕ್ಯಾನ್ಸರ್‍ನ ಮೊದಲನೇ ಹಂತ ಮತ್ತು ಎರಡನೇ ಹಂತದ ರೋಗಿಗಳಿಗೆ ಉಚಿತವಾಗಿ ಆಯುರ್ವೇದ ಔಷಧಿಯನ್ನು ನೀಡಲಾಗುವುದು.

ರಾಜ್ಯದ್ಯಂತ ಕ್ಯಾನ್ಸರ್‍ನಿಂದ ಬಳಲುತ್ತಿರುವ ಒಂದನೇ ಮತ್ತು ಎರಡನೇ ಹಂತದ ಎಲ್ಲಾ ರೀತಿಯ ರೋಗಿಗಳು ಸಾವಿರಾರು ಹಣ ಕೊಟ್ಟು ಸೀಮಾರೂಬ ಗ್ಲಾಕಾ ಎಂಬ ಗಿಡದ ಎಲೆಗಳ ಕುಡಿಯನ್ನು ಖರೀದಿಸುತ್ತಿದ್ದಾರೆ.

ಈ ಎಲೆಗಳನ್ನು ಪಡೆಯಲು ಕೇರಳ, ಶಿವಮೊಗ್ಗ, ತಮಿಳುನಾಡು ಹಾಗೂ ಆಂಧ್ರಪ್ರದೇಶಗಳಿಗೆ ಹೋಗುತ್ತಿರುವುದು ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಆನೇಕಲ್ ತಾಲ್ಲೂಕು ಸರ್ಜಾಪುರ ಹೋಬಳಿಯ ಮುತ್ತನಲ್ಲೂರು ಅಮಾನಿಖಾನೆಯಲ್ಲಿರುವ ಆಗ್ರ್ಯಾನಿಕ್ ಆಯುರ್ವೇದ ಫಾರಂನಲ್ಲಿ 12ರಿಂದ 15 ದಿನಗಳ ಕಾಲ ನರಳಿನಲ್ಲಿ ಒಣಗಿಸಿ ಪುಡಿ ಮಾಡಿದ ಸೀಮಾರೂಬ ಗ್ಲಾಕಾವನ್ನು ಉಚಿತವಾಗಿ ಇದೇ 27ರಿಂದ ಪ್ರತಿ ಗುರುವಾರ ಮತ್ತು ಭಾನುವಾರ ಬೆಳಗ್ಗೆ 9ರಿಂದ ಸಂಜೆ 6 ಗಂಟೆಯವರೆಗೆ ನೀಡಲಾಗುವುದು.

ಇಲ್ಲಿ ಥೈರಾಯ್ಡ್‍ನಿಂದ ಬಳಲುತ್ತಿರುವವರೆಗೂ ಸಹ ಔಷಧ ಲಭ್ಯವಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ದೂ.ಸಂ.9844970163 ಹಾಗೂ 9844257988 ಸಂಪರ್ಕಿಸಬಹುದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ