ಆನೆ ನಡೆದಿದ್ದೇ ದಾರಿ, ಒಂಟಿ ಸಲಗ ಅಪಾಯಕಾರಿ-ಮಾಜಿ ಸಿಎಂಸಿದ್ದರಾಮಯ್ಯ

ಬೆಂಗಳೂರು, ಜೂ.6- ಆನೆ ನಡೆದಿದ್ದೇ ದಾರಿ ಎಂಬ ಡೈಲಾಗ್ ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಗಮನ ಸೆಳೆದರು.

ಇಂದು ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ದುನಿಯಾವಿಜಿ ಅಭಿನಯ ಹಾಗೂ ನಿರ್ದೇಶನದ ಸಲಗ ಚಿತ್ರದ ಮುಹೂರ್ತ ಸಮಾರಂಭಕ್ಕೆ ಆಗಮಿಸಿದ ಸಿದ್ದರಾಮಯ್ಯ, ಆನೆ ನಡೆದಿದ್ದೆ ದಾರಿ, ಒಂಟಿ ಸಲಗ ಅಪಾಯಕಾರಿ. ಆದರೆ ಈ ಸಲಗ ಪರೋಪಕಾರಿಯಾಗಿರಲಿ ಎಂದರು.

ವಿಜಿಯ ಎರಡು ಸಿನಿಮಾವನ್ನು ನಾನು ನೋಡಿದ್ದೇನೆ. ಜನರಿಗೆ ಸಂದೇಶ ಹಾಗೂ ಮನರಂಜನೆ ನೀಡುವಂತಹ ಸಿನಿಮಾಗಳು ಕೊಡಲಿ ಎಂದು ಚಿತ್ರತಂಡಕ್ಕೆ ಶುಭಕೋರಿದರು.

ನಾನು ಚಿಕ್ಕದಿನಿಂದಲು ಸಿನಿಮಾಗಳನ್ನು ನೋಡುತ್ತ ಬಂದಿದ್ದೇನೆ. ಆಗ ಸಂದೇಶ ಸಾರುವ ಸಿನಿಮಾಗಳು ಬರುತ್ತಿತ್ತು. ಆದರೆ ಈಗ ಅಂತಹ ಮೌಲ್ಯಯುತ ಚಿತ್ರಗಳು ಈಗ ಕಣ್ಮರೆಯಾಗುತ್ತಿವೆ. ಈಗಿನ ಯುವನಿರ್ಮಾಪಕ, ನಿರ್ದೇಶಕರು ಸಮಾಜಕ್ಕೆ ಸಂದೇಶ ಸಾರುವ ಚಿತ್ರಗಳನ್ನು ನಿರ್ಮಿಸುವಂತಾಗಲಿ ಎಂದು ಕಿವಿ ಮಾತು ಹೇಳಿದರು.

ಸಿನಿಮಾರಂಗಕ್ಕೂ ಮಾಜಿ ಸಿಎಂ ಸಿದ್ದರಾಮಯ್ಯಗೂ ನಿಕಟ ನಂಟಿದೆ. ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಕನ್ನಡ ಚಿತ್ರರಂಗಕ್ಕೂ ಹಲವು ಕೊಡುಗೆಗಳನ್ನು ನೀಡಿದ್ದು ಅಲ್ಲದೆ ಕನ್ನಡ ನಾಡಿನ ಸಿನಿಮಾಗಳಿಗೆ ಏಳ್ಗಿಗೆ ಶ್ರಮಿಸುತ್ತಾ ಬಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ