ಕ್ಯಾನ್ಸರ್ ನಿರೋಧಕ ಅಂಶವುಳ್ಳ ಸಸಿ ನೆಟ್ಟ ಸಿಎಂ ಕುಮಾರಸ್ವಾಮಿ

ಬೆಂಗಳೂರು,ಜೂ.6- ಪರಿಸರ ದಿನಾಚರಣೆ ಅಂಗವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂದು ವಿಧಾನಸೌಧದ ಆವರಣದಲ್ಲಿ ಕ್ಯಾನ್ಸರ್ ನಿರೋಧಕ ಅಂಶವುಳ್ಳ ಸಸಿ ನೆಟ್ಟು , ರೈತರು ಈ ಗಿಡವನ್ನು ಹೆಚ್ಚಾಗಿ ಬೆಳೆಯುವಂತೆ ಮನವಿ ಮಾಡಿದ್ದಾರೆ.

ಇಂದು ಬೆಳಗ್ಗೆ ಸಂಪುಟ ಸಭೆಗೂ ಮುನ್ನ ಮೂರು ಸರಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಕುಮಾರಸ್ವಾಮಿ ಅವರು, ಮೊದಲು ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ಪುಣ್ಯಸ್ಮರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ನಂತರ ವಿಧಾನಸೌಧದ ಪೂರ್ವ ದಿಕ್ಕಿನಲ್ಲಿ ಏರ್ಪಡಿಸಿದ್ದ ಬಿಎಂಟಿಸಿ ವತಿಯಿಂದ ಖರೀದಿಸಲಾಗಿರುವ 25 ಪಿಂಕ್ ಸಾರಥಿ ವಾಹನಗಳ ಲೋಕಾರ್ಪಣೆಯಲ್ಲೂ ಭಾಗವಹಿಸಿದರು.

ತದನಂತರ ನೆಹರು ಪ್ರತಿಮೆ ಬಳಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕ್ಯಾನ್ಸರ್ ನಿರೋಧಕ ಗಿಡಗಳನ್ನು ನೆಟ್ಟು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಗಿಡ ಕ್ಯಾನ್ಸರ್ ನಿರೋಧಕ ಶಕ್ತಿ ಹೊಂದಿದೆ. ಇದರ ತೊಗಟೆ ಮತ್ತು ಬೀಜದಲ್ಲಿ ಔಷಧೀಯ ಗುಣಗಳಿವೆ. ಕೈಗಾರಿಕಾ ಉತ್ಪನ್ನಗಳಿಗೂ ಈ ಗಿಡ ಹೆಚ್ಚು ಬಳಕೆಯಾಗುತ್ತದೆ.

ನಾಡಿನ ರೈತರು ಈ ಗಿಡವನ್ನು ನೆಡುವ ಮೂಲಕ ತಮ್ಮ ವಾಣಿಜ್ಯ ಬೆಳೆಗಳಂತೆ ಇದನ್ನು ಬಳಸಿಕೊಳ್ಳಬಹುದು.ಇಂತಹ ಹೊಸ ಕೃಷಿ ವಿಧಾನಗಳಿಗೆ ಹೆಚ್ಚು ಒತ್ತು ನೀಡಬೇಕೆಂದು ರೈತರಲ್ಲಿ ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ