ಯಡಿಯೂರಪ್ಪನವರು ನೂರು ಬಾರಿ ಜಪಿಸಿದರೂ ಸಿಎಂ ಆಗಲ್ಲ

ಕಲಬುರಗಿ,ಮೇ 16- ಮುಖ್ಯಮಂತ್ರಿ ಸ್ಥಾನದಲ್ಲಿ ಈಗಾಗಲೇ ಕುಮಾರಸ್ವಾಮಿ ಇದ್ದಾರೆ. ಹೀಗಾಗಿ ಈ ಬಗ್ಗೆ ಚರ್ಚಿಸುವ ಅಗತ್ಯವೇ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಠೋಡ ಪರ ಪ್ರಚಾರಕ್ಕೆ ಆಗಮಿಸಿದ್ದ ಅವರು, ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಮುಖ್ಯಮಂತ್ರಿಯಾಗಲು ಎಚ್.ಡಿ.ರೇವಣ್ಣನವರೂ ಅರ್ಹರಿದ್ದಾರೆ ಎಂಬ ಸಿದ್ದರಾಮಯ್ಯನವರ ಟ್ವೀಟ್‍ಗೆ ಅವರು ಪ್ರತಿಕ್ರಿಯಿಸಿದರು.

ಸಿದ್ದರಾಮಯ್ಯನವರು ಎಚ್.ಡಿ.ರೇವಣ್ಣ ಇಬ್ಬರೂ ಆತ್ಮೀಯರು. ಯಾವ ಅರ್ಥದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲವೆಂದರು. ಬಿಎಸ್ ಯಡಿಯೂರಪ್ಪನವರು ನೂರು ಬಾರಿ ಜಪಿಸಿದರೂ ಮುಖ್ಯಮಂತ್ರಿಯಾಗಲ್ಲ. ಅವರದು ಹಗಲುಗನಸು ಎಂದರು.

ನನ್ನ ಸೇರಿ ಅನೇಕರಿಗೆ ಸಿಎಂ ಆಗುವ ಅರ್ಹತೆ ಇದೆ ಎಂದ ಅವರು, ಮೇ 23, 24 ಅಲ್ಲ; ನಾಲ್ಕು ವರ್ಷದವರೆಗೂ ನಾವೇ ರಾಜ್ಯಭಾರ ಮಾಡುತ್ತೇವೆ. ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ ಎಂದರು.

ಕ್ಷೇತ್ರದ ವಿವಿಧೆಡೆ ಅವರು ಸಂಚರಿಸಿ ಮತ ಯಾಚಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ