ಉಮೇಶ್ ಜಾಧವ್ ದುಡ್ಡಿಗಾಗಿ ಬಿಜೆಪಿಗೆ ಮಾರಾಟವಾಗಿದ್ದಾರೆ: ಡಿಸಿಎಂ ಪರಮೇಶ್ವರ್ ಕಿಡಿ

ಕಲಬುರಗಿ: ಕಾಂಗ್ರೆಸ್ ಪಕ್ಷ ಅವರಿಗೆ ಮಾತೃ ಸಮಾನ. ಅಂತ ಮಾತೆಗೆ ಮೋಸ ಮಾಡಿ ಜಾಧವ್ ದುಡ್ಡಿಗಾಗಿ ಬಿಜೆಪಿಗೆ ಮಾರಾಟವಾಗಿರುವುದು ನಾಚಿಗೆಗೇಡು ಎಂದು ಡಿಸಿಎಂ ಡಾ.ಜಿಪರಮೇಶ್ವರ್ ಕಿಡಿಕಾರಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ಮೊದಲ ಸಲ‌ ಗೆದ್ದಾಗ ಎರಡನೆಯ ಸಲ ಗೆದ್ದಾಗ ಜಾಧವ್ ಚೆನ್ನಾಗಿಯೇ ಇದ್ದ ಬಂದಾಗೆಲ್ಲ ಕಾಲಿಗೆ ನಮಸ್ಕರಿಸಿರಿ ಅಣ್ಣಾ ಆ ಕೆಲಸ ಆಗಬೇಕು ಈ ಕೆಲಸ ಆಗಬೇಕು ಅಂತಿದ್ದ ಈಗ ಹಣ ತಗೊಂಡು ಬಿಜೆಪಿಗೆ ಸೇರಿದ್ದಾನಂತೆ ಎಷ್ಟು ಅಂತ ನನಗೆ ಗೊತ್ತಿಲ್ಲ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ರಾಜಕೀಯವಾಗಿ ಬೆಳಕಿಗೆ ತಂದವರ ವಿರುದ್ದ ಚುನಾವಣೆ ನಿಲ್ಲುವುದರ ಜತೆಗೆ ತನ್ನ ಮಗ ಅವಿನಾಶ್ ಜಾಧವ್‌ನಿಗೆ ಟಿಕೇಟ್ ಕೊಡಿಸಿದ್ದು ಇನ್ನೆಂತ ಮೋಸ ಎಂದು ಡಿಸಿಎಂ ತಿರುಗೇಟು ನೀಡಿದರು.

“ನೋಡಪ್ಪ ಜಾಧವ್ ನಮಗೆ ಮೋಸ ಮಾಡಿ ಪಕ್ಷ ಬಿಟ್ಟ ನೀನೂ ಕೂಡಾ ಪಕ್ಷ ಬಿಡಬೇಡ ಎಂದು ರಾಠೋಡ್ ಗೆ ಹೇಳಿದ್ದೆ. ಆತ ಪ್ರಮಾಣ ಮಾಡಿದ್ದಾನೆ‌ ಅಂತ ಪ್ರಾಮಾಣಿಕನಿಗೆ ಮತ ನೀಡಿ” ಎಂದು ಕರೆ ನೀಡಿದರು.

ಮೈತ್ರಿ ಸರಕಾರ 15 ಲಕ್ಷ ರೈತರ 7500 ಕೋಟಿ ರೈತರ ಸಾಲ ಮನ್ನಾ ಮಾಡಲಾಗಿದೆ. ಸರಕಾರ ಬೀಳಿಸಲು ಯಡಿಯೂರಪ್ಪ ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯವರು ಏನೇ ಪಲ್ಟಿ ಹೊಡೆದರೂ ಸರಕಾರ ಬೀಳಲ್ಲ ಎಂದು ಇದೇವೇಳೆ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ