ಪರಪುರುಷನ ಜೊತೆ ಇದ್ದಾಗ ರೆಡ್‍ಹ್ಯಾಂಡಾಗಿ ಸಿಕ್ಕಿಬಿದ್ದ ಪತ್ನಿ

ಹಾಸನ: ಪತಿಯನ್ನು ದೂರ ಮಾಡಿರುವ ವಿವಾಹಿತ ಮಹಿಳೆಯೊಬ್ಬಳು ಪರಪುರುಷನ ಜೊತೆ ಸಿಕ್ಕಿಬಿದ್ದ ಘಟನೆ ಹಾಸನದಲ್ಲಿ ನಡೆದಿದೆ.

ನಗರದ ಹೊರವಲಯದ ಬಡಾವಣೆಯ ಬಿಟಿ ಕೊಪ್ಪಲುನಲ್ಲಿ ಈ ವಿಲಕ್ಷಣ ಕೃತ್ಯ ನಡೆದಿದೆ. ಉದಯಗಿರಿ ನಿವಾಸಿ ಆಗಿರುವ ರಾಘವೇಂದ್ರ ಮತ್ತು ಕಾಟಿಕೊಪ್ಪಲು ನಿವಾಸಿ ಗಜಲಕ್ಷ್ಮಿ ನಡುವೆ ಹಿರಿಯರೇ ನಿಂತು 8 ವರ್ಷದ ಹಿಂದೆ ಮದುವೆ ಮಾಡಿಸಿದ್ದರು. ಇವರಿಬ್ಬರ ದಾಂಪತ್ಯ ಸಾಕ್ಷಿಯಾಗಿ ಆರು ವರ್ಷ ವಯಸ್ಸಿನ ಮಗುವೊಂದು ಇದೆ.

ಕಳೆದ ಐದಾರು ವರ್ಷದಿಂದ ಗಂಡನೊಂದಿಗೆ ವಾಸವಿಲ್ಲದ ಗಜಲಕ್ಷ್ಮಿ ಪ್ರತ್ಯೇಕವಾಗಿ ವಾಸವಿದ್ದಾಳೆ. ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಈಕೆಗೆ ಪರಪುರುಷನೊಬ್ಬನ ಜೊತೆ ಸಲುಗೆ ಬೆಳೆದಿದೆ. ನೊಂದ ಪತಿ ಆಕೆಯ ಮನೆಯವರಿಗೆ ವಿಷಯ ತಿಳಿಸಿದ್ದಾನೆ. ಆಗ ಆಕೆ ಪೋಷಕರು ಹಲವು ಬಾರಿ ರಾಜಿ ಪಂಚಾಯ್ತಿ ನಡೆಸಿದರೂ ಸಹ ಪ್ರಯೋಜನ ಆಗದೇ ಪತಿಯ ವಿರುದ್ಧ ಪರಿಹಾರಕ್ಕಾಗಿ ಆಗ್ರಹಿಸಿ ಗಜಲಕ್ಷ್ಮಿ ನ್ಯಾಯಾಲಯದ ಮೊರೆ ಹೋಗಿದ್ದಾಳೆ.

ಕಳೆದ ಮೂರು ದಿನಗಳ ಹಿಂದೆ ತಮ್ಮ ಮಗಳನ್ನು ನೋಡಲು ಗಜಲಕ್ಷ್ಮಿ ಸಹೋದರ ಮತ್ತು ಆಕೆಯ ತಾಯಿ ಮುಂಜಾನೆಯೇ ಮನೆಯ ಬಳಿ ಬಂದಿದ್ದಾರೆ. ಈ ವೇಳೆ ಮಗಳ ಮನೆಯಲ್ಲಿ ಪರಪುರುಷನೊಬ್ಬ ಇರುವುದನ್ನು ನೋಡಿದ ಆಕೆಯ ತಾಯಿ ಕೂಡ ತಬ್ಬಿಬ್ಬಾಗಿದ್ದಾರೆ. ಆಕೆಯೊಂದಿಗೆ ಇದ್ದ ವ್ಯಕ್ತಿಯನ್ನು ನಗರದ ದಾಸರ ಕೊಪ್ಪಲು ನಿವಾಸಿ ರಾಜೇಂದ್ರ ರೆಡ್ಡಿ ಎಂದು ಗುರುತಿಸಲಾಗಿದೆ. ಇದನ್ನು ಪ್ರಶ್ನಿಸಲು ಹೋದ ಗಜಲಕ್ಷ್ಮಿಯ ಪತಿ ರಾಘವೇಂದ್ರ ಮೇಲೆ ಹಲ್ಲೆ ಮಾಡಲಾಗಿದೆ.

ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ರಾಜೇಂದ್ರ ರೆಡ್ಡಿ ಸಹೋದರ ಮತ್ತು ಆತನ ಸ್ನೇಹಿತನ ಮೇಲೆ ಪ್ರಕರಣ ದಾಖಲಾಗಿದೆ. ಜೊತೆಗೆ ಕೌಟುಂಬಿಕ ವ್ಯಾಜ್ಯಗಳ ನ್ಯಾಯಾಲಯದಲ್ಲಿ ದಂಪತಿ ಕಲಹ ಕುರಿತು ದೂರು ಮತ್ತು ಪ್ರತಿ ದೂರು ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ