ರಮೇಶ್ ಜಾರಕಿಹೊಳಿ ಅಡ್ವಾನ್ಸ್ ತಗೊಂಡಿದ್ದಾರೆ ಅದಕ್ಕೆ ರಾಜೀನಾಮೆ ಕೊಡ್ತೀನಿ ಅಂತಾರೆ – ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ

ದಾವಣಗೆರೆ, ಏ.23-ರಮೇಶ್ ಜಾರಕಿ ಹೊಳಿ ಬಿಜೆಪಿಗೆ ಹೋಗುವುದಾದರೆ ಹೋಗಲಿ ಅದರಿಂದ ಏನೂ ವ್ಯತ್ಯಾಸವಾಗುವುದಿಲ್ಲ ಎಂದು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂದಿದ್ದರೂ ರಮೇಶ್ ಜಾರಕಿಹೊಳಿ ಬಿಜೆಪಿ ಹೋಗೋ ಗಿರಾಕಿನೇ ಎಂದರು.

ಅವರು ಬಿಜೆಪಿಗೆ ಹೋಗುವುದರಿಂದ ಮೈತ್ರಿ ಸರ್ಕಾರ ಏನು ಪತನವಾಗುವುದಿಲ್ಲ. ಪಕ್ಷ ಬಿಡ್ತೀನಿ, ಬಿಡ್ತೀನಿ ಅಂತ ಹೇಳ್ತಾನೇ ಇದಾರೆ, ಇನ್ನು ಪಕ್ಷ ತೊರ್‍ದಿಲ್ಲ.

ಹೋಗೋದಿದ್ರೆ ಹೋಗ್ಲಿ…ಬಿಜೆಪಿಯವರು ಮೈತ್ರಿ ಸರ್ಕಾರ ಪತನವಾಗುತ್ತೆ ಎಂದು ಹೇಳ್ತಾನೆ ಬಂದಿದ್ದಾರೆ, ಅವರ್ ಹೇಳಿದ್ದೊಂದೂ ಆಗುವುದಿಲ್ಲ ಎಂದರು.

ರಮೇಶ್ ಜಾರಕಿಹೊಳಿ ಅಡ್ವಾನ್ಸ್ ತಗೊಂಡಿದ್ದಾರೆ ಅದಕ್ಕೆ ರಾಜೀನಾಮೆ ಕೊಡ್ತೀನಿ ಅಂತಾರೆ. ಯಾರ್ ಹೋದ್ರೂ ಏನೂ ಆಗೋದಿಲ್ಲ ಎಂದು ಶಾಮನೂರು ಶಿವಶಂಕರಪ್ಪ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ