ಪಕ್ಷ ತಾತ್ಕಾಲಿಕ ಶಿಕ್ಷೆ ಕೊಟ್ಟರೆ ಸ್ವೀಕರಿಸುತ್ತೇನೆ, ಎಲ್ಲಾ ಮುಗಿದಾಗಿದೆ ಪ್ರಚಾರದ ಅವಶ್ಯಕತೆ ಇಲ್ಲ; ಚೆಲುವರಾಯಸ್ವಾಮಿ

ಬೆಂಗಳೂರುನಿಖಿಲ್ ಪರವಾಗಿ ದೇವೇಗೌಡರ ಕುಟುಂಬ ಹಾಗೂ ಸಚಿವರು ಪ್ರಚಾರ ಮಾಡ್ತಿದ್ದಾರೆ. ಸಮಲತಾ ಪರವಾಗಿ ದರ್ಶನ್ ,ಯಶ್ ಹಾಗೂ ಸಾಮಾನ್ಯ ಕಾರ್ಯಕರ್ತರು , ಸಾಮಾನ್ಯ ಜನ ಪ್ರಚಾರ ಮಾಡ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಚೆಲುವರಾಯಸ್ವಾಮಿ ಹೇಳಿದ್ದಾರೆ.

ಮಾಧ್ಯಮ ಜತೆ ಮಾತನಾಡಿದ ಮಾಜಿ ಸಚಿವ ಚೆಲುವರಾಯಸ್ವಾಮಿ, ಶಿವರಾಮೇಗೌಡರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅದು ಯಾರಿಗೂ ಗೌರವವಲ್ಲ.

ಪಿಟೀಲ್ ಚೌಡಯ್ಯ ಕುಟುಂಬದ ಬಗ್ಗೆ ಗೌರವವಿದೆ. ಶ್ರೀಮತಿಯವರನ್ನು ಬೇರೆ ಅನ್ನೋದಕ್ಕೆ ಆಗುತ್ತಾ. ಯಾರಾದರೂ ಮಾತಾಡಲಿ. ಮಹಿಳೆ ಬಗ್ಗೆ ಮಾತಾನಾಡೋದು ಗೌರವವಲ್ಲ. ಜನ ನೋಡ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿ, ಸಚಿವರನ್ನು ನೋಡ್ತಿದ್ದಾರೆ.  ವೈಯಕ್ತಿಕವಾಗಿ ಟೀಕೆ ಮಾಡೋದು ಚುನಾವಣೆಯಲ್ಲ. ನಮ್ಮ ಜಿಲ್ಲೆಗೆ ಗೌರವವಲ್ಲ ಎಂದರು.

ಎಲ್ ಆರ್ ಶಿವರಾಮೇಗೌಡರ ಮಗನ ಆಡಿಯೋ ವಿಚಾರವಾಗಿ ಮಾತನಾಡಿದ ಅವರು,  ಅದರ ಬಗ್ಗೆ ಮಾಹಿತಿ ಇಲ್ಲ. ಬಹಳಷ್ಟು ನಡೀತಿದೆ ಅಂತ ಹೇಳುತ್ತಿದ್ದಾರೆ.

ಮಂಡ್ಯ ಜನ ಪ್ರೀತಿ ನೋಡ್ತಾರೆ‌. ಕುಮಾರಸ್ವಾಮಿ ಮುಖ್ಯಂಮತ್ರಿ ಆಗಬೇಕೆಂದು ಕೂಗಿ ಹೇಳಿದ್ರು‌. ಉದಾಹರಣೆಗೆ ನಮ್ಮನ್ನೇ ಹೊಳೆ ಥರ ಕೊಚ್ಚಿ ಹೊರ ಹಾಕ್ತು. ಯಾರೇ ಗೆದ್ರೂ, ಅದು ಮಂಡ್ಯ ಜನರ ತೀರ್ಮಾನ. ದುಡ್ಡಿಂದ ಅಳಿಯೋದಕ್ಕೆ ಆಗಲ್ಲ. ಸುಮಲತಾ ಗೆದ್ರೂ ಅಷ್ಟೇ, ಇನ್ನೊಬ್ಬರೂ ಗೆದ್ದರೂ  ಅದು ಜನರ ತೀರ್ಮಾನ ಎಂದು ಹೇಳಿದರು.

ಸುಮಲತಾಗೆ ಪರೋಕ್ಷ ಬೆಂಬಲ ವಿಚಾರವಾಗಿ ಮಾತನಾಡಿದ ಅವರು, ಅದರ ಬಗ್ಗೆ ನಾನು ಮಾತನಾಡಲ್ಲ‌. ಪಕ್ಷ ನನ್ನ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಪರಾಧ ಮಾಡಿಲ್ಲ. ಬೈ ಚಾನ್ಸ್ , ಯಾರಾದ್ರು ಒತ್ತಡಕ್ಕೆ ಮಾಡಿದ್ರೆ, ಪಕ್ಷದ ತೀರ್ಮಾನಕ್ಕೆ ಗೌರವ ಕೊಡಬೇಕಾಗುತ್ತೆ.  ತಂದೆ ತಾಯಿ ಹೊಡೆದ್ರೆ ಬೇಜಾರು ಮಾಡಿಕೊಳ್ಳಲು ಆಗುತ್ತದೆಯೇ. ಆಗ ನೋವು ಆಗುತ್ತೆ.  ಪಕ್ಷ ಬಿಡಲ್ಲ, ಕಾಂಗ್ರೆಸ್ ಬಿಡಲ್ಲ. ಅಲ್ಲೇ ಇರ್ತೀನಿ. ತಾತ್ಕಾಲಿಕ ಶಿಕ್ಷೆ ಕೊಟ್ರೆ ಸ್ವೀಕರಿಸುತ್ತೇನೆ. ಎಲ್ಲರೂ ಬೇಡ ಅಂದಾಗ ಮನೆಯಲ್ಲೇ ಇರ್ತೀನಿ. ಎಲ್ಲಾ ಮುಗಿದೋಗಿದೆ. ಪ್ರಚಾರದ ಅವಶ್ಯಕತೆ ಇಲ್ಲ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ