ಅಂಗವಿಕಲನಿಗೆ ನೀಡಿ ಅವಕಾಶ

ಬೀದರ್. ಅಂಗವೈಕಲ್ಯ ಆದರು ಸಹ ನಾನು ಕ್ರೀಡೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಯಶಸ್ವಿ ಯಾಗಿರುವೆ. ಅದೇ ರೀತಿ ರಾಜಕೀಯ ರಂಗದಲ್ಲಿ ಸಾಧನೆ ಮಾಡಲು ಅಂಗವಿಕಲನಾದ ನನಗೆ ಒಂದು ಬಾರಿ ಅವಕಾಶ ನೀಡಿ ಎಂದು ಬೀದರ್ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ಅಂತಾರಾಷ್ಟ್ರೀಯ ಕ್ರೀಡಾ ಪಟು ಮೌಲಪ್ಪ ಮಾಳಗೆ ಹೇಳಿದರು.

ಕಂದಗೂಳ, ಚಾಂಬೋಳ, ಹಿಪ್ಪಳಗಾಂವ, ದದ್ದಾಪುರ ಸೇರಿದಂತೆ ವಿವಿಧೆಡೆ ಬಿರಿಸಿನ ಪ್ರಚಾರ ನಡೆಸಿ ಮತಯಾಚನೆ ಮಾಡಿ ಮಾತನಾಡಿ, ಅಂಗವಿಕಲನಾದ ನನಗೂ ಒಂದ ಬಾರಿ ಅವಕಾಶ ನೀಡಿ ಎಂದು ಮನವಿ ಮಾಡಿದರು.

ರಾಷ್ಟ್ರೀಯ ಪಕ್ಷಗಳು ಕ್ಷೇತ್ರವನ್ನು ಕಡೆಗಣಿಸಿವೆ. ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ನಾನು ಚುನಾವಣೆ ಕಣಕ್ಕೆ ಇಳಿದಿರುವೆ. ಟ್ರ್ಯಾಕ್ಟರ್ ಚಿಹ್ನೆ ಹೊಂದಿರುವ ನನಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ಬೀದರ್ ಹಿಂದುಳಿದ ಕ್ಷೇತ್ರ. ನೀರಾವರಿ, ಶಿಕ್ಷಣ ಸೇರಿ ವಿವಿಧ ಕ್ಷೇತ್ರದಲ್ಲಿ ತೀರಾ ಹಿಂದುಳಿದಿದೆ. ನನಗೆ ಮತ ನೀಡುವ ಮೂಲಕ ಸಂಸತ್ ನಲ್ಲಿ ಬೀದರ್ ಧ್ವನಿ ಮೊಳಗಿಸುವಂತೆ ಮಾಡಬೇಕು ಎಂದು ಮನವಿ ಮಾಡಿದರು.

ವಿನೋದ, ಭೀಮಾ, ಮಹೇಶ, ಶ್ರೀಮಂತ, ಝರೆಪ್ಪ, ಅಶೋಕ ಮಾಳಗೆ, ವಿಜಯಕುಮಾರ, ಸುನೀಲ, ಶ್ರೀಕಾಂತ, ಪ್ರದೀಪ, ಸುರೇಶ, ಕಾಶಿನಾಥ, ವಿಶ್ವನಾಥ, ಶಿವು ಇತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ