ಇಂದು ವರನಟ ಡಾ.ರಾಜ್‍ಕುಮಾರ್ ಪುಣ್ಯ ಸ್ಮರಣೆ

ಬೆಂಗಳೂರು, ಏ.12- ವರನಟ ಡಾ. ರಾಜ್‍ಕುಮಾರ್ ಅವರ ಪುಣ್ಯಸ್ಮರಣೆ ಅಂಗವಾಗಿ ಇಂದು ನಗರದ ಕಂಠೀರವ ಸ್ಟುಡಿಯೋ ಆವರಣದಲ್ಲಿ ರಾಜ್ ಅವರ ಸಮಾಧಿಗೆ ಕುಟುಂಬ ವರ್ಗದವರು ಪೂಜೆ ಸಲ್ಲಿಸಿದರು.

ಇಂದೇ ರಾಜ್‍ಕುಮಾರ್ ಹಾಗೂ ಪಾರ್ವತ್ಮ ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯನ್ನು ಪುಣ್ಯಭೂಮಿಯ ಸಮಾಧಿಗೆ ವಿಶೇಷ ಅಲಂಕಾರ ಮಾಡುವ ಮೂಲಕ ನೆರವೇರಿಸಿದರು.

ರಾಜ್‍ಕುಮಾರ್ ಅವರ ಸಹೋದರಿ ನಾಗಮ್ಮ, ಮಕ್ಕಳಾದ ರಾಘವೇಂದ್ರರಾಜ್‍ಕುಮಾರ್, ಶಿವರಾಜ್‍ಕುಮಾರ್ ಹಾಗೂ ಪುನೀತ್‍ರಾಜ್ ಕುಮಾರ್ ಸೇರಿದಂತೆ ಮಕ್ಕಳು, ಮೊಮ್ಮಕ್ಕಳು, ಕುಟುಂಬಸ್ಥರು, ಆತ್ಮೀಯರು ಉಪಸ್ಥಿತರಿದ್ದು ಪೂಜೆ ನೆರವೇರಿಸಿದರು.

2006ರಲ್ಲಿ ನಿಧನರಾದ ರಾಜ್‍ಕುಮಾರ್ ಅವರ 13ನೇ ಪುಣ್ಯತಿಥಿ ಅಂಗವಾಗಿ ಸಮಾಧಿ ಬಳಿ ನೂರಾರು ಮಂದಿ ಆಗಮಿಸಿ ಪೂಜೆ ಸಲ್ಲಿಸಿದರು.

ಪುನೀತ್ ರಾಜ್‍ಕುಮಾರ್ ಅವರ ಪಿಆರ್‍ಕೆ ಪ್ರೊಡಕ್ಷನ್‍ನಿಂದ ನಿರ್ಮಾಣವಾಗಿರುವ ಚೊಚ್ಚಲ ಚಿತ್ರ ಕವಲುದಾರಿ ಇಂದು ರಾಜ್ ಅವರ ಪುಣ್ಯಸ್ಮರಣೆ ದಿನವೇ ಬಿಡುಗಡೆಗೊಳ್ಳುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ