ಮಧುಬಂಗಾರಪ್ಪ ಜನನಾಯಕನಾಗಿ ಬೆಳೆಯುತ್ತಾರೆ-ಗೀತಾ ಶಿವರಾಜ್‍ಕುಮಾರ್

ಶಿವಮೊಗ್ಗ, ಏ.9- ಮಧು ಬಂಗಾರಪ್ಪ ನನ್ನ ತಂದೆಯಂತೆಯೇ ಜನರ ಮಧ್ಯೆಯೇ ಬೆಳೆಯುತ್ತಿದ್ದಾನೆ, ಅವರ ಏಳಿಗೆಗೆ ದುಡಿಯುತ್ತಿದ್ದಾನೆ ಎಂದು ಗೀತಾ ಶಿವರಾಜ್‍ಕುಮಾರ್ ಇಂದಿಲ್ಲಿ ಹೇಳಿದರು.

ಸಹೋದರ ಮಧು ಬಂಗಾರಪ್ಪ ಪರವಾಗಿ ಇಂದು ಪ್ರಚಾರ ಕೈಗೊಂಡ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಈ ಹಿಂದೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಮೈತ್ರಿ ಸರ್ಕಾರ ರಾಜ್ಯದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದೆ.ಈಗ ಕಾಂಗ್ರೆಸ್ ಕೂಡ ಬೆಂಬಲ ನೀಡಿರುವುದರಿಂದ ಗೆಲುವು ನಿಶ್ಚಿತ ಎಂದು ಹೇಳಿದರು.

ರೈತರಿಗಾಗಿ ಮಧು ಸದಾ ಶ್ರಮಿಸುತ್ತಾರೆ. ಈಗಾಗಲೇ 6 ಸಾವಿರ ರೈತರಿಗೆ ಬಗರ್ ಹುಕುಂ ಯೋಜನೆಯಡಿ ಜಮೀನು ಕೊಡಿಸಿದ್ದಾರೆ.ನೀರಾವರಿ ಯೋಜನೆಗಳಿಗಾಗಿ ಸುಮಾರು 247 ಕೋಟಿ ಅನುದಾನ ತಂದಿದ್ದಾರೆ.

ಇನ್ನಷ್ಟು ಸೇವೆ ಮಾಡಲು ತಂದೆ (ಬಂಗಾರಪ್ಪ)ಯ ಹಾದಿಯನ್ನೇ ತುಳಿಯುತ್ತಿರುವ ಇವರು ಮುಂದೆ ಜನನಾಯಕನಾಗಿ ಬೆಳೆಯುತ್ತಾರೆ ಎಂದು ಗೀತಾ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ