ಚುನಾವಣೆಯಲ್ಲಿ ಜಾತಿ ರಾಜಕಾರಣ ತರಬಾರದು-ಸಚಿವ ಎಂಟಿಬಿ ನಾಗರಾಜ್

MTB NAGARAJ

ಬೆಂಗಳೂರು, ಏ.3-ಮದುವೆಯಾಗಿ ಸಂಸಾರ ಮಾಡಿದ ಮೇಲೆ ಸುಮಲತಾ ಗೌಡ್ತಿ ಆಗಿದ್ದಾರೆ.ಚುನಾವಣೆಯಲ್ಲಿ ಜಾತಿ ರಾಜಕಾರಣ ಎಳೆದು ತರಬಾರದೆಂದು ಸಚಿವ ಎಂಟಿಬಿ ನಾಗರಾಜ್ ಅವರು ಜೆಡಿಎಸ್ ನಾಯಕ ಎಲ್.ಆರ್.ಶಿವರಾಮೇಗೌಡರಿಗೆ ಟಾಂಗ್ ನೀಡಿದ್ದಾರೆ.

ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ಕಾಂಗ್ರೆಸ್ ಮುಖಂಡರು ಕೆಲಸ ಮಾಡುತ್ತಿದ್ದಾರೆಂಬ ಆಕ್ಷೇಪದ ನಡುವೆ ಎಂಟಿಬಿ ನಾಗರಾಜ್ ಹೇಳಿಕೆ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಚುನಾವಣೆಯಲ್ಲಿ ಗೆಲ್ಲಬೇಕಾದರೆ ಕೈಮುಗಿದು ಜನರಿಂದ ಮತ ಕೇಳಬೇಕು ಅದನ್ನು ಬಿಟ್ಟು ಇಲ್ಲ ಸಲ್ಲದ ಹೇಳಿಕೆ ನೀಡಿ ಜನರ ಭಾವನೆಗಳನ್ನು ಕೆರಳಿಸ ಬಾರದು.

ಯಾವುದೇ ಹೆಣ್ಣು ಮಗಳು ತವರು ಮನೆ ಬಿಟ್ಟು ಗಂಡನ ಮನೆ ಸೇರಿದ ಮೇಲೆ ಗಂಡನ ಜಾತಿಗೆ ಸೇರುತ್ತಾಳೆ ಎಂದರು.

28ವರ್ಷಗಳ ಹಿಂದೆ ಅಂಬರೀಷ್ ಅವರನ್ನು ಮದುವೆಯಾದ ಸುಮಲತಾ ಅವರಿಗೆ ಒಬ್ಬ ಮಗನು ಇದ್ದಾನೆ. ಈಗ ಅವರನ್ನು ಗೌಡ್ತಿ ಅಲ್ಲ ಎಂದು ಹೇಳುವುದು ಒಪ್ಪಲಾಗುವುದಿಲ್ಲ. ಸಮ್ಮಿಶ್ರ ಸರ್ಕಾರ ಒಳ್ಳೆಕೆಲಸ ಮಾಡಿದೆ, ಅದನ್ನು ಜನರ ಮುಂದಿಟ್ಟು ಜನರ ಮತ ಕೇಳೋಣ. ಜಾತಿ ರಾಜಕಾರಣ ಬೇಡ ಎಂದು ಅವರು ಸಲಹೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ