ವಯನಾಡ್ ನಿಂದ ರಾಹುಲ್ ವಿರುದ್ಧ ಬಿಜೆಪಿಯ ತುಷಾರ್ ವೆಳ್ಳಪಲ್ಲಿ ಕಣಕ್ಕೆ

ನವದೆಹಲಿ: ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ, ಅಮೇಠಿ ಜತೆಗೆ ಕೇರಳದ ವಯಾನಾಡ್​ನಿಂದಲೂ ಸ್ಪರ್ಧಿಸುತ್ತಾರೆ ಎಂದು ಘೋಷಣೆಯಾಗುತ್ತಿದ್ದಂತೆಯೇ ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದ್ದ ಬಿಜೆಪಿ ಈಗ ವಯನಾಡ್ ನಲ್ಲಿ ರಾಹುಲ್ ಗಾಂಧಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ.

ವಯಾನಾಡ್​ನಲ್ಲಿ ರಾಹುಲ್​ಗೆ ಪ್ರತಿಸ್ಪರ್ಧಿಯಾಗಿ ಎನ್​ಡಿಎ, ಭಾರತ್​ ಧರ್ಮ ಜನ ಸೇನಾದ ಅಧ್ಯಕ್ಷ ತುಷಾರ್​ ವೆಳ್ಳಪಲ್ಲಿಯವರನ್ನು ಕಣಕ್ಕೆ ಇಳಿಸಿದೆ.

ತುಷಾರ್​ ವೆಳ್ಳಪಲ್ಲಿ ಅವರನ್ನು ವಯಾನಾಡ್​ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಹೆಮ್ಮೆಯೆನಿಸುತ್ತದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ತುಷಾರ್​ ಅವರು ಕ್ರಿಯಾತ್ಮಕ ಯುವ ನಾಯಕ. ಬಿಜೆಪಿಯ ಮೊದಲ ಆದ್ಯತೆಯಾಗಿರುವ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದೆಡೆಗಿನ ಬದ್ಧತೆಯನ್ನು ಅವರು ಪ್ರತಿಬಿಂಬಿಸುತ್ತಾರೆ. ಅವರೊಂದಿಗೆ ಜತೆಯಾಗಿ ಎನ್​ಡಿಎ ಕೇರಳದಲ್ಲಿ ಪರ್ಯಾಯ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಟ್ವೀಟ್​ ಮಾಡಿದ್ದಾರೆ.

Thushar vellappally bjp wayanad

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ