ಸುಮಲತಾಗೆ ಕಹಳೆ ಊದುತ್ತಿರುವ ರೈತನ ಚಿಹ್ನೆ

ಮಂಡ್ಯ: ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಷ್​ ಅವರಿಗೆ ಚುನಾವಣಾ ಆಯೋಗ ಕಹಳೆ ಊದುತ್ತಿರುವ ರೈತನ ಚಿಹ್ನೆಯನ್ನು ನೀಡಿದೆ.

ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸುಮಲತಾ ಅಂಬರೀಷ್​ ಅವರ ಚುನಾವಣಾ ಏಜೆಂಟ್​ ಮದನ್​ ಸಮ್ಮುಖದಲ್ಲಿ ಕಹಳೆ ಊದುತ್ತಿರುವ ರೈತನ ಚಿಹ್ನೆಯನ್ನು ಅಂತಿಮಗೊಳಿಸಲಾಗಿದೆ. ಈ ಮೊದಲು ಲಕ್ಕಿ ಡ್ರಾದಲ್ಲಿ ಸುಮಲತಾ ಅವರು ಬಯಸಿದ್ದ ರಣ ಕಹಳೆ ಊದುವ ರೈತ, ತೆಂಗಿನ ತೋಟ, ಕಬ್ಬಿನ ಗದ್ದೆ ಮುಂದೆ ರೈತ ಚಿಹ್ನೆಗಳು ಬೇರೆಯವರ ಪಾಲಾಗಿದ್ದವು.

ಆ ನಂತರ ಚುನಾವಣಾ ಆಯೋಗ ತಳ್ಳುವ ಗಾಡಿ ಚಿಹ್ನೆಯನ್ನು ಸುಮಲತಾ ಅವರಿಗೆ ನೀಡಿತ್ತು. ಚಿಹ್ನೆ ಬದಲಾವಣೆ ಸಂಬಂಧ ಸುಮಲತಾ ಅವರು ಆಯೋಗದೊಂದಿಗೆ ಮಾತಕತೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ನೇತೃತ್ವದಲ್ಲಿ ಸಭೆ ನಡೆಸಿ ಚಿಹ್ನೆಯನ್ನು ಹಂಚಿಕೆ ಮಾಡಲಾಗಿದೆ.

sumalatha ambareesh gets desired symbol in lok sabha elections

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ