ಚುನಾವಣಾ ಬಂದೋವಸ್ತ್ ಹಿನ್ನಲೆ-ರಾಜ್ಯಕ್ಕೆ ಆಗಮಿಸಿದ ಕೇಂದ್ರ ಪಡೆಗಳು

ಬೆಂಗಳೂರು, ಮಾ.20- ರಾಜ್ಯದಲ್ಲಿ ಮುಕ್ತ ಹಾಗೂ ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಚುನಾವಣಾ ಬಂದೋಬಸ್ತ್‍ಗಾಗಿ 10 ಕಂಪೆನಿ ಕೇಂದ್ರ ಪಡೆಗಳು ರಾಜ್ಯಕ್ಕೆ ಆಗಮಿಸಿವೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಕಮಲ್‍ಪಂಥ್ ತಿಳಿಸಿದ್ದಾರೆ.

ಮೂರು ಕಂಪೆನಿ ಬಿಎಸ್‍ಎಫ್, ಮೂರು ಕಂಪೆನಿ ಸಿಆರ್‍ಪಿಎಫ್ ಹಾಗೂ ನಾಲ್ಕು ಕಂಪೆನಿ ಸಿಐಎಸ್‍ಎಫ್ ಪಡೆಗಳು ಬಂದಿವೆ ಎಂದು ವಿವರಿಸಿದರು.

ಗುಲ್ಬರ್ಗ, ಹುಬ್ಬಳ್ಳಿ, ಶಿವಮೊಗ್ಗ, ಮಂಗಳೂರು, ಮೈಸೂರು ಮುಂತಾದ ಕಡೆ ಈ ಪಡೆಗಳನ್ನು ಸ್ಥಳೀಯ ಪೊಲೀಸರ ಜತೆಗೆ ನಿಯೋಜಿಸಲಾಗುವುದು ಎಂದರು.

ಮುಕ್ತ ಹಾಗೂ ಶಾಂತಿಯುತ ಮತದಾನಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಡಲಾಗಿದೆ.ಇನ್ನಷ್ಟು ಕೇಂದ್ರ ಪಡೆಗಳು ಚುನಾವಣಾ ಬಂದೋಬಸ್ತ್‍ಗಾಗಿ ರಾಜ್ಯಕ್ಕೆ ಆಗಮಿಸಲಿವೆ ಎಂದು ಅವರು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ