ಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತೆ

ಚನ್ನಪಟ್ಟಣ, ಮಾ.19- ಕೊಳೆತ ಮೃತದೇಹವೊಂದು ಎಂಕೆ ದೊಡ್ಡಿ ಪೊಲೀಸ್ ಠಾಣೆ ವ್ಯಾಪ್ತಿಯ ತಾಲ್ಲೂಕಿನ ಸಿಬನಹಳ್ಳಿ ಕೆರೆಯಲ್ಲಿ ಪತ್ತೆಯಾಗಿದೆ.

ಸುಮಾರು 40 ರಿಂದ 45 ವರ್ಷ ವಯಸ್ಸಿನ ಪುರುಷನ ದೇಹ ಕೆರೆಯ ನೀರಿನಲ್ಲಿ ಕೊಳೆತೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳೀಯರು ಕೆರೆ ಬಳಿಗೆ ಬಂದಾಗ ದುರ್ನಾತವನ್ನು ಗಮನಿಸಿ ಸ್ಥಳಕ್ಕೆ ಹೋಗಿ ನೋಡಿದಾಗ ಅದು ಶವ ಎಂದು ಖಾತ್ರಿಪಡಿಸಿಕೊಂಡಿದ್ದಾರೆ.

ಘಟನೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆ ಸ್ಥಳಕ್ಕೆ ಬಂದ ಎಂಕೆ ದೊಡ್ಡಿ ಪೊಲೀಸ್ ಠಾಣೆಯ ಪಿಎಸ್‍ಐ ವಸಂತ್‍ಕುಮಾರ್ ಮೃತದೇಹ ವೀಕ್ಷಣೆ ಮಾಡಿದ್ದಾರೆ ಹಾಗೂ ಸ್ಥಳೀಯರ ಸಹಕಾರದಿಂದ ಆತನ ಚಹರೆ ಹಾಗೂ ವಿಳಾಸ ಪತ್ತೆ ಕಾರ್ಯ ಕೈಗೊಂಡರೂ ಆತ ಅಪರಿಚಿತನಾದ್ದರಿಂದ ಆತನ ವಿಳಾಸ ಪತ್ತೆಯಾಗಲಿಲ್ಲ.

ಕೆರೆ ಅಂಚಿನಲ್ಲಿ ಚಪ್ಪಲಿಗಳು ಹಾಗೂ ಆತನ ವಸ್ತುಗಳು ದೊರೆತಿದ್ದು, ಸ್ನಾನ ಮಾಡಲು ಕೆರೆಗೆ ಇಳಿದು ಸ್ನಾನಕ್ಕೆ ಇಳಿದಿರುವ ಸ್ಥಳ ಆಳವಾಗಿದ್ದರಿಂದ ಈಜಲು ಬಾರದೆ ಮುಳುಗಿ ಸಾವನ್ನಪ್ಪಿರಬಹುದೆಂದು ಅಲ್ಲಿನ ಸ್ಥಳಿಯರು ತಿಳಿಸಿದ್ದಾರೆ.

ಮೃತದೇಹವನ್ನು ನಗರದ ಆಶ್ರಯ ಚಾರಿಟಬಲ್ ಟ್ರಸ್ಟ್ ಸಹಕಾರದೊಂದಿಗೆ ನಗರದ ರಾಮಮ್ಮನ ಕೆರೆಯ ಹಿಂದೂ ರುದ್ರಭೂಮಿಯಲ್ಲಿ ವಿಧಿ-ವಿಧಾನಗಳ ಮುಖಾಂತರ ಶವ ಸಂಸ್ಕಾರ ನಡೆಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ