ಉಮೇಶ್ ಜಾಧವ್ ಸೋಲಿಸಲು ಕೈ ಪಡೆಯ ರಣತಂತ್ರ

ಕಲಬುರಗಿ, ಮಾ.13-ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿಯಾಗಿ ಲೋಕಸಭೆ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಬಿಜೆಪಿ ಅವರು ಸೆಡ್ಡು ಹೊಡೆದಿರುವ ಶಾಸಕ ಉಮೇಶ್ ಜಾಧವ್ ಅವರನ್ನು ಸೋಲಿಸಲು ಕೈ ಪಡೆ ರಣತಂತ್ರ ಹೆಣೆದಿದೆ.

ಹೇಗಾದರೂ ಮಾಡಿ ಡಾ. ಜಾಧವ್ ಅವರನ್ನು ಸೋಲಿಸಬೇಕೆಂದು ಇದೇ ಮಾ. 16ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಚಾರ ಸಭೆ ಏರ್ಪಡಿಸಿದ್ದು ಈ ಹಿನ್ನಲೆಯಲ್ಲಿ ಸಚಿವ ಪ್ರಿಯಾಂಕ ಖರ್ಗೆ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಪ್ರಮುಖರ ಸಭೆ ಇಂದು ನಡೆಯಿತು.

ಸುಮಾರು ಮೂರುವರೆ ಲಕ್ಷದಷ್ಟು ಲಂಬಾಣಿ ಮತದಾರರು ಈ ಕ್ಷೇತ್ರದಲ್ಲಿದ್ದು ಈ ಎಲ್ಲ ಮತಗಳು ಬಿಜೆಪಿಗೆ ಹೋದರೆ ಕಾಂಗ್ರೆಸ್ ಗೆಲುವಿಗೆ ಅಡ್ಡಿಯಾಗಬಹುದು ಎಂಬುದು ರಾಜಕೀಯ ಲೆಕ್ಕಾಚಾರವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ