ವಕೀಲರ ಪತ್ನಿಗೆ ಥಳಿಸಿ ನಗ ನಾಣ್ಯ ದೋಚಿದ ದರೋಡೆಕೋರರು

ಕಲಬುರಗಿ,ಮಾ.13- ನಗರದ ಗಾಬರೆ ಲೇಔಟ್‍ನಲ್ಲಿರುವ ವಕೀಲ ವೀರಣ್ಣ ಬಿರಾದಾರ ಅವರ ಮನಗೆ ನುಗ್ಗಿದ ದರೋಡೆಕೋರರ ತಂಡವೊಂದು ಪತ್ನಿಗೆ ಥಳಿಸಿ ಚಿನ್ನ ನಗದು ದೋಚಿ ಪರಾರಿಯಾದ ಘಟನೆ ನಿನ್ನೆ ತಡರಾತ್ರಿ ಗಾಬರೆ ಲೇಔಟ್‍ನಲ್ಲಿ ನಡೆದಿದೆ.

ಮೂರ್ನಾಲ್ಕು ಜನರಿದ್ದ ತಂಡವು ಮನೆಗೆ ನುಗ್ಗಿ ವಕೀಲರ ಪತ್ನಿ ಮೇಲೆ ಹಲ್ಲೆ ನಡೆಸಿ ಅವರಿಂದ ತಿಜೋರಿ ಕೀಲಿ ಕೈ ಪಡೆದು ಚಿನ್ನ, ಬೆಳ್ಳಿ, ನಗದು ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿ ತಿಳಿದ ತಕ್ಷಣ ಪೊಲೀಸರು ಶ್ವಾನದಳದೊಂದಿಗೆ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಸ್ಟೇಷನ್ ಬಜಾರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ನಡೆಸಿದ್ದಾರೆ.

ಈ ಘಟನೆಯಿಂದ ನಾಗರಿಕರು ತೀವ್ರ ಆತಂಕಕ್ಕೊಳಗಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ