ಗೊಂದಲವಿಲ್ಲದೇ ಸೀಟು ಹಂಚಿಕೆ ಆಗಲಿದೆ : ಡಿ.ಸಿ.ಎಂ.ಪರಮೇಶ್ವರ್

ಹುಬ್ಬಳ್ಳಿ,ಮಾ.9- ಯಾವುದೇ ಗೊಂದಲವಿಲ್ಲದೆ ಮೈತ್ರಿ ಸರ್ಕಾರದಲ್ಲಿ ಸಿಟು ಹಂಚಿಕೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೀಟು ಹಂಚಿಕೆ ಸಂಬಂಧ ಚರ್ಚೆ ಮಾಡಲಾಗುತ್ತಿದೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ನೇತ್ರತ್ವದಲ್ಲಿ ಮಾತುಕತೆ ಆಗಿದೆ. ನಮ್ಮಪಕ್ಷದ ಸಭೆ ಇದೇ 11ಕ್ಕೆ ನಡೆಯಲಿದೆ. ಆ ಸಭೆಯಲ್ಲಿ ಅಂತಿಮ ನಿರ್ಧಾರ ಹೊರಬೀಳಲಿದೆ ಎಂದರು.

ಪ್ರದೇಶ ಕಾಂಗ್ರೆಸ್ ಸಭೆಯಲ್ಲಿ ಕೂಡಾ ಲೋಕಸಭೆ ಸಿಟು ಹಂಚಿಕೆ ಚರ್ಚೆ ಆಗಿವೆ. ಈಗಾಗಲೇ ಪಟ್ಟಿ ತಯಾರಿದ್ದು, ಗೊಂದಲ ಇಲ್ಲದೆ ಸೀಟು ಹಂಚಿಕೆ ಆಗಲಿವೆ. ಮಿತ್ರ ಪಕ್ಷ ಹೆಚ್ಚಿನ ಸೀಟಿನ ಬೇಡಿಕೆ ಇಟ್ಟಿದ್ದಾರೆ, ಅಂತಿಮ ತಿರ್ಮಾನ ಮಾಡಲಾಗುವುದು ಎಂದು ಹೇಳಿದರು.

ಚರ್ಚೆ ವೇಳೆ ಮಂಡ್ಯ ಹಾಗೂ ಹಾಸನದ ಕ್ಷೇತ್ರದ ಮಾತುಕತೆ ಕೂಡಾ ಮಾಡುವುದಾಗಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ