ಪ್ರಧಾನಿ ಮೋದಿ ಸುಳ್ಳುಗಾರ-ಕಾಂಗ್ರೇಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ

ಹುಬ್ಬಳ್ಳಿ, ಮಾ.9- ಪ್ರಧಾನಿ ನರೇಂದ್ರ ಮೋದಿ ಓರ್ವ ಸುಳ್ಳುಗಾರ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮೋದಿ ಅವರು ಕೇವಲ ಚುನಾವಣಾ ಪ್ರಚಾರ ಮಾಡಿದ್ದಾರೆ. ಪ್ರಚಾರದ ಸಂದರ್ಭದಲ್ಲಿ ಅವರು ಯಾವುದೇ ಅಭಿವೃದ್ಧಿ ಕೆಲಸದ ಬಗ್ಗೆ ಪ್ರಸ್ತಾಪಿಸಿಲ್ಲ ಎಂದರು.

ಮೋದಿ ಕೇವಲ ಬೆಂಗಳೂರು ಯೋಜನೆ ಹಾಗೂ ಹುಬ್ಬಳ್ಳಿ ಧಾರವಾಡದ ಒಂದು ಯೋಜನೆ ಬಗ್ಗೆ ಮಾತನಾಡಿದ್ದು ಬಿಟ್ಟರೆ ತಾವು ಈವರೆಗೆ ಜನರಿಗೆ ಮಾಡಿದ್ದೇನು ಎಂಬುದನ್ನು ಹೇಳಲಿಲ್ಲ. ಮೋದಿ 5 ವರ್ಷಗಳಲ್ಲಿ ಸಾಧಿಸಿದ್ದು ಏನೂ ಇಲ್ಲ. ನಿರದ್ಯೋಗಿಗಳಿಗೆ ನೌಕರಿ ಕೊಡಲಿಲ್ಲ. ಅವರ ವರದಿ ಪ್ರಕಾರವೇ 3 ಲಕ್ಷ ನೌಕರಿ ಕಡಿಮೆಯಾಗಿದೆ. 5 ವರ್ಷದಲ್ಲಿ 27 ಲಕ್ಷ ನೌಕರಿ ಕೊಡಲಾಗಿದೆ ಎಂದು ದೂರಿದರು.

ರಾಮ ದೇವರ ಮೇಲೆ ಆಣೆ ಇಟ್ಟು ಕಪ್ಪುಹಣ ತರುತ್ತೇವೆ ಎಂದರು. ಆದರೆ ಈವರೆಗೆ ಕಪ್ಪುಹಣದ ಸುಳಿವೇ ಇಲ್ಲ. ರೈತರ ಆತ್ಮಹತ್ಯೆಯ ಬಗ್ಗೆ ಕಾಳಜಿ ಇಲ್ಲ. ಇನ್ಶುರೆನ್ಸ್ ಕಂಪನಿಗಳಿಗೆ ಲಾಭ ಮಾಡಿಕೊಡುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

ಯುಪಿಎ ಕಾಲದಲ್ಲಿ ಕೂಡಾ ಸರ್ಜಿಕಲ್ ದಾಳಿ ನಡೆದಿವೆ. ಸೈನಿಕರ ಹೆಣದ ಮೇಲೆ ರಾಜಕಿಯ ಮಾಡುವುದು ಸರಿಯಲ್ಲ, ಎಲ್ಲರೂ ಒಗ್ಗಟ್ಟಾಗಿ ನಡೆಯಬೇಕು ಎಂದರು.

ಮೋದಿಯವರ 5 ವರ್ಷಗಳ ವೈಫಲ್ಯಗಳನ್ನು ಜನರ ಮುಂದಿಡಲಿದ್ದೇವೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ