ವೈಯುಕ್ತಿಕ ವಿಚಾರದ ಗಲಾಟೆಗೂ ಪಕ್ಷಕ್ಕೂ ಸಂಬಂಧವಿಲ್ಲ-ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್

ಹುಬ್ಬಳ್ಳಿ, ಮಾ.3- ಕಂಪ್ಲಿ ಶಾಸಕ ಗಣೇಶ ಹಾಗೂ ಆನಂದ್‍ಸಿಂಗ್ ನಡುವೆ ವೈಯಕ್ತಿಕ ವಿಚಾರಗಳಿಗೆ ಗಲಾಟೆಯಾಗಿದೆ. ಈಗಾಗಲೇ ಎಫ್‍ಐಆರ್ ಆಗಿ ತನಿಖೆ ಕೂಡ ನಡೆಯುತ್ತಿದೆ. ನಾವು ಯಾರನ್ನೂ ರಕ್ಷಿಸುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಲಾಟೆ ಸಂಬಂಧ ವೈರಲ್ ಆಗಿರುವ ವಿಡಿಯೋ ಬಗ್ಗೆ ತನಿಖೆ ನಡೆಯುತ್ತಿದೆ. ಅದೇನೋ ಎರಡು-ಮೂರು ಸೆಕೆಂಡ್ ವಿಡಿಯೋ ಇದೆ. ಅದರಿಂದ ಯಾವುದೂ ಗೊತ್ತಾಗುತ್ತಿಲ್ಲ. ವೈಯಕ್ತಿಕ ಕಾರಣಕ್ಕಾಗಿ ಅವರು ಗಲಾಟೆ ಮಾಡಿಕೊಂಡಿದ್ದಾರೆ. ಗೃಹ ಇಲಾಖೆಯಿಂದ ಪ್ರಕರಣದ ತನಿಖೆ ನಡೆಯುತ್ತಿದೆ. ಗೃಹ ಇಲಾಖೆ ಕಾನೂನು ಪ್ರಕಾರವೇ ಕ್ರಮ ಕೈಗೊಂಡಿದೆ. ಪಕ್ಷಪಾತ ಧೋರಣೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಏನು ಗಲಾಟೆ ನಡೆದಿದೆ ಎಂಬುದು ತನಿಖೆ ನಂತರವೇ ಗೊತ್ತಾಗಲಿದೆ. ಆ ಕೆಲವು ಸೆಕೆಂಡ್‍ಗಳ ವಿಡಿಯೋದಿಂದ ಏನೂ ತಿಳಿಯುವುದಿಲ್ಲ ಎಂದು ಹೇಳಿದ ಅವರು ವೈಯಕ್ತಿಕ ವಿಚಾರದ ಗಲಾಟೆಗೂ, ಪಕ್ಷಕ್ಕೂ ಸಂಬಂಧವಿಲ್ಲ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ