ಭಾರತದತ್ತ ಗುಂಡು ಹಾರಿಸುತ್ತಲೇ ಇದೆ ಪಾಕ್​: ಗಡಿಯಲ್ಲಿ ಮತ್ತಷ್ಟು ಉದ್ವಿಗ್ನ

ಶ್ರೀನಗರ: ಆಕ್ರಮಣಕಾರಿ ಪ್ರವೃತ್ತಿ ಬಿಡುವಂತೆ ಪಾಕ್​ಗೆ ಜಾಗತಿಕವಾಗಿ ಒತ್ತಡ ಹೇರಲಾಗುತ್ತಿದ್ದರೂ ಗಡಿಯಲ್ಲಿ ಮಾತ್ರ ಅಪ್ರಚೋದಿತ ದಾಳಿ ಮೂಲಕ ವಿಕೃತಿ ತೋರುತ್ತಲೇ ಇದೆ.

ನಿನ್ನೆ ಸಂಜೆಯಿಂದಲೂ ಜಮ್ಮು ಮತ್ತು ಕಾಶ್ಮೀರದ  ಬರಮುಲ್ಲಾದ ಉರಿಯಲ್ಲಿ ಪಾಕ್​, ಭಾರತೀಯ ಸೇನಾ ನೆಲೆಯ ಮೇಲೆ ಅಪ್ರಚೋದಿತ ದಾಳಿ ನಡೆಸುತ್ತಿದೆ. ಕಮಲಕೋಟೆಯ ಮೇಲೂ ಪಾಕ್​ ದಾಳಿ ನಡೆಸಿದ್ದು, ಪರಿಣಾಮ ಒಬ್ಬ ಗಾಯಗೊಂಡಿರುವುದಾಗಿ ತಿಳಿದುಬಂದಿದೆ.

ಭಾರತೀಯ ಸೇನೆಯೂ ಇದಕ್ಕೆ  ತಕ್ಕ ಪ್ರತ್ಯುತ್ತರ ನೀಡಿದೆ. ಭಾರತ-ಪಾಕ್​ ನಡುವೆ ಉದ್ವಿಗ್ನ ಪರಿಸ್ಥಿತಿ ಎದುರಾಗಿರುವ ನಡುವೆಯೂ ಪಾಕ್​ನ  ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವುದು  ಎರಡು ರಾಷ್ಟ್ರಗಳ ಸಂಬಂಧವನ್ನ ಮತ್ತಷ್ಟು ಹಾಳುಗೆಡುವುತ್ತಿದೆ. ಇದರಿಂದ ಗಡಿಯಲ್ಲಿ ಮತ್ತಷ್ಟು ಉದ್ವಿಗ್ನತೆ  ನಿರ್ಮಾಣವಾಗಿದೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ