ಆದಿಚುಂಚನಗಿರಿ ಮಠದ ವತಿಯಿಂದ ಡಾ.ಶರತ್ ಚಂದ್ರರವರಿಗೆ ವಿಜ್ಞಾತಂ ಪ್ರಶಸ್ತಿ

ಆದಿಚುಂಚನಗಿರಿ, ಫೆ.20-ಆದಿಚುಂಚನಗಿರಿ ಮಠದ ವತಿಯಿಂದ ಡಾ.ಶರತ್‍ಚಂದ್ರ ಅವರಿಗೆ ವಿಜ್ಞಾತಂ (ವಿಜ್ಞಾನ-ತಂತ್ರಜ್ಞಾನ)ಪ್ರಶಸ್ತಿ ನೀಡಲಾಯಿತು.

ಶ್ರೀ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಿರ್ಮಲಾನಂದನಾಥ ಸ್ವಾಮೀಜಿಅವರ 6ನೇ ವಾರ್ಷಿಕ ಪಟ್ಟಾಭೀಷೆಕ ಅಂಗವಾಗಿ ವಿಜ್ಞಾನ-ತಂತ್ರಜ್ಞಾನ ಮೇಳವನ್ನು ಕೂಡ ಆಯೋಜಿಸಲಾಗಿತ್ತು. ಉಪ ಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್, ಸಣ್ಣ ನೀರಾವರಿ ಸಚಿವ ಹಾಗು ಮಂಡ್ಯ ಜಿಲ್ಲಾಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ