ಇಂದು ಮತ್ತು ನಾಳೆ ಕೈಲಾಸ ಮಾನಸ ಸರೋವರ ಯಾತ್ರೆ ಸಮಾಲೋಚನೆ ಸೆಮಿನಾರ್

ಬೆಂಗಳೂರು, ಫೆ.16-ಅಕ್ಕ ಅಡ್ವೆಂಚರ್ಸ್ ಬರ್ನ್ ಬೌಂಡರೀಸ್ ಸಹಯೋಗದಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆ ಸಮಾಲೋಚನೆ ಸೆಮಿನಾರ್ ಇಂದು ಮತ್ತು ನಾಳೆ(ಫೆ.17) ಮಹಾಲಕ್ಷ್ಮಿಪುರದ ಹಯಗ್ರೀವ ಧಾಮದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ನಿಸರ್ಗ, ಯಾತ್ರಿಗಳಿಗೆ ಯಾತ್ರೆಯ ಬಗ್ಗೆ ಮಾರ್ಗಸೂಚಿ ಮತ್ತು ಅವರ ಎಲ್ಲಾ ರೀತಿಯ ಪ್ರಶ್ನೆಗಳಿಗೆ ಉತ್ತರ, ಯಾವ ರೀತಿ ತಯಾರಾಗಬೇಕು, ಎಷ್ಟು ದಿನಗಳಿಗೆ ಅಲ್ಲಿ ತಲುಪುವುದು, ವಯೋಮಿತಿ, ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ, ವೀಸಾ ಹಾಗೂ ಪರ್ಮಿಟ್ ಅಗತ್ಯವಿರುವ ಇತರ ಮಾಹಿತಿಗಳು, ಯಾವ ಸಂಸ್ಥೆಯನ್ನು ವಿಚಾರಿಸಬೇಕು ಎಂಬಿತ್ಯಾದಿ ಸಮಸ್ಯೆಗಳಿಗೆ ಉತ್ತರ ನೀಡಲು ಸೆಮಿನಾರ್ ಆಯೋಜಿಸಲಾಗಿದೆ ಎಂದರು.

ಬೆಂಗಳೂರಿನಿಂದ ಹೊರಡುವ ಯಾತ್ರೆ ಸುಮಾರು 12 ರಿಂದ 14 ದಿನಗಳ ಕಾಲ ಬೇಕಾಗುತ್ತದೆ. ಸದರಿ ಯಾತ್ರೆ ಕೈಲಾಸ ಪರ್ವತದ ಪರಿಕ್ರಮವೇ 42 ಕಿ.ಮೀ ದೂರ ಕ್ರಮಿಸಬೇಕಾಗಿರುವುದರಿಂದ ಎಚ್ಚರಿಕೆಯ ಕ್ರಮವಾಗಿ ಈ ಯೋಚನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ