ಕಾಂಗ್ರೇಸ್ ಶಾಸಕರ ಒಳಜಗಳ ಮತ್ತು ಅಸಮಾಧಾನಕ್ಕೆ ನಾವು ಕಾರಣರಲ್ಲ: ಮಾಜಿ ಡಿಸಿಎಂ. ಆರ್.ಆಶೋಕ್

ಬೆಂಗಳೂರು, ಫೆ.13-ಕಾಂಗ್ರೆಸ್ ಶಾಸಕರು ಎಲ್ಲಿಗೆ ಹೋಗುತ್ತಾರೆ, ಎಲ್ಲಿಗೆ ಬರುತ್ತಾರೆ ಎಂಬುದು ನಮಗೆ ಸಂಬಂಧಪಟ್ಟಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ಪಕ್ಷದಲ್ಲಿನ ಒಳಜಗಳ, ಅಸಮಾಧಾನಕ್ಕೆ ನಾವು ಕಾರಣರಲ್ಲ. ರೆಸಾರ್ಟ್‍ನಲ್ಲಿ ಅವರು ಮಾಡಿಕೊಂಡಿರುವ ಗಲಾಟೆ ವಿಚಾರವೂ ನಮಗೆ ಸಂಬಂಧಿಸಿದಲ್ಲ. ಅವರು ಇಷ್ಟು ದಿನ ಎಲ್ಲಿದ್ದರು ಎಂಬುದು ಗೊತ್ತಿಲ್ಲ. ವಿವಾದಿತ ಧ್ವನಿಸುರುಳಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಆಡಿಯೋ ಕೇಳಿಲ್ಲ. ಆಡಿಯೋ ಕೇಳಿದ ಬಳಿಕ ಮತ್ತೆ ಪ್ರತಿಕ್ರಿಯೆ ನೀಡಲು ಸಾಧ್ಯ ಎಂದರು.

ಆಡಿಯೋ ಬಿಡುಗಡೆಗೂ ಮುನ್ನ ವಿಧಾನಸಭಾಧ್ಯಕ್ಷರಿಗೆ ತಿಳಿಸಬೇಕಿತ್ತು.ಅದರ ಬದಲಾಗಿ ಮುಖ್ಯಮಂತ್ರಿ ಸುದ್ದಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಿ ಸಭಾಧ್ಯಕ್ಷರ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ಅವರು ಆರೋಪಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ