ವಾಟರ್ ವಾಟರ್ ಕೆಳಗೆ ಸಿಲುಕಿ ಯುವಕನ ಸಾವು

ಟಿ.ನರಸೀಪುರ, ಫೆ.10- ರಸ್ತೆ ಕಾಮಗಾರಿ ನಿರ್ವಹಿಸುವ ಯುವಕನೊಬ್ಬ ವಾಟರ್‍ಟ್ಯಾಂಕರ್ ಕೆಳಗೆ ಸಿಲುಕಿ ಸಾವಿಗೀಡಾಗಿರುವ ಘಟನೆ ತಾಲ್ಲೂಕಿನ ನಿಲಸೋಗೆ ಗ್ರಾಮದ ಬಳಿ ಸಂಭವಿಸಿದೆ.

ರಸ್ತೆ ಕೆಲಸ ಮಾಡುವ ಮಂಡ್ಯ ತಾಲ್ಲೂಕಿನ ಮತ್ತಹಳ್ಳಿ ಗ್ರಾಮದ ಅಭಿಷೇಕ್ (22)ಎಂಬಾತ ಸಾವನ್ನಪ್ಪಿದ ದುರ್ದೈವಿ.

ಈತ ವಾಟರ್ ಟ್ಯಾಂಕರ್‍ನ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದು, ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ತೆರಳುವಾಗ ಟ್ಯಾಂಕರ್ ಮೇಲೆ ಕುಳಿತು ಹೋಗುತ್ತಿದ್ದ. ಈ ವೇಳೆ ಟ್ಯಾಂಕರ್ ಚಾಲನೆ ಮಾಡುತ್ತಿದ್ದ ಚಾಲಕನ ನಿಯಂತ್ರಣ ಕಳೆದುಕೊಂಡ ವಾಟರ್ ರಸ್ತೆ ಪಕ್ಕಕ್ಕೆ ಮಗುಚಿ ಬಿದ್ದಿದೆ.

ಟ್ಯಾಂಕರ್ ಮೇಲೆ ಕುಳಿತಿದ್ದ ಅಭಿಷೇಕ್ ಕೆಳಗೆ ಬಿದ್ದು ಟ್ಯಾಂಕರ್ ಕೆಳಗೆ ಸಿಲುಕಿ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾನೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಟಿ.ನರಸೀಪುರ ಪೆÇಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ