ಮಾಡೋದೆಲ್ಲಾ ಅನಾಚಾರ ಮನೆ ಮುಂದೆ ಬೃಂದಾವನ ಶೆಮ್ ಆನ್ ಯು : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿದ್ದರಾಮಯ್ಯ ಟ್ವಿಟ್

ಬೆಂಗಳೂರು, ಫೆ.8- ಮಾಡೋದೆಲ್ಲಾ ಅನಾಚಾರ ಮನೆ ಮುಂದೆ ಬೃಂದಾವನ ಶೆಮ್ ಆನ್ ಯು ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟ್ ಮಾಡಿದ್ದಾರೆ.

ಆಪರೇಷ್‍ನ ಕಮಲದ ಆಡಿಯೋ ನಿಮ್ಮ ನಿಯತ್ತನ್ ಬಹಿರಂಗ ಗೊಳಿಸಿದೆ. ಆ ಆಡಿಯೋವನ್ನ ಕೇಳಿ ಎಂದು ಅವರು ತಮ್ಮ ಟ್ವಿಟ್‍ನಲ್ಲಿ ಟೀಕಿಸಿದ್ದಾರೆ. ಆಪರೇಷನ್ ಕಮಲದ ಮೂಲಕ ಬಿಜೆಪಿ ಆಡಳಿತ ಪಕ್ಷದ ಶಾಸಕರನ್ನ ಸೆಳೆಯುವ ಯತ್ನ ನಡೆಸಿದ್ದನ್ನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಆಡಿಯೋ ಬಿಡುಗಡೆಗೊಳಿಸಿದರು.

ಗುರಮಿಠಲ್ ಶಾಸಕ ನಾಗನಗೌಡ ಕಂದ್ಕುರ ಅವರ ಪುತ್ರ ಶರಣಗೌಡ ಅವರೊಂದಿಗೆ ನಡೆಸಿದರೆನ್ನಲಾದ ಆಡಿಯೋ ಸಂಭಾಷಣೆ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಾಯಿತು.

ಬಜೆಟ್ ಮಂಡಿಸುವ ಮುನ್ನ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಆಡಿಯೋ ಬಿಡುಗಡೆ ಮಾಡಿ ಬಿಜೆಪಿಯವರ ಈ ಧೋರಣೆಯನ್ನ ತೀವ್ರವಾಗಿ ಖಂಡಿಸಿದ್ದರಲ್ಲದೆ ಈ ಸಂಬಂಧ ಪ್ರಧಾನಿಯವರು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ