ಜೆಡಿಎಸ್ ವರಿಷ್ಟ ದೇವೆಗೌಡರನ್ನು ಭೇಟಿ ಮಾಡಿದ ನಟ ಶಿವರಾಜ್‍ಕುಮಾರ್

ಬೆಂಗಳೂರು, ಫೆ.5-ನಟ ಶಿವರಾಜ್‍ಕುಮಾರ್ ಮತ್ತು ಅವರ ಪತ್ನಿ ಗೀತಾ, ಮಾಜಿ ಶಾಸಕ ಮಧುಬಂಗಾರಪ್ಪ ಅವರು ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದರು.

ಪದ್ಮನಾಭನಗರದಲ್ಲಿರುವ ಅವರ ನಿವಾಸಕ್ಕೆ ತೆರಳಿ ದೇವೇಗೌಡರ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.

ಈ ವೇಳೆ ನಟ ಶಿವರಾಜ್‍ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ದೇವೇಗೌಡರು ಆರೋಗ್ಯವಾಗಿದ್ದಾರೆ.ಯಾವುದೇ ಸಮಸ್ಯೆ ಇಲ್ಲ, ಸ್ನಾಯು ಸೆಳೆತ ಕಡಿಮೆಯಾಗಿದೆ ಎಂದರು.

ನನಗೂ ಬೆನ್ನು ನೋವು ಬಂದಿತ್ತು.ವೈದ್ಯರ ಸಲಹೆ ಪಡೆದುಕೊಂಡಿದ್ದೇನೆ. ಈಗ ಆರಾಮಾಗಿದ್ದೇನೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ