ಸುತ್ತೂರು ಮಠದಲ್ಲಿ ಕಾರ್ಯಕ್ರಮವೊಂದರ ವೇಳೆ ಬಲೂನ್‍ಗಳ ಸ್ಪೋಟ

ಮೈಸರೂ/ಸುತ್ತೂರು,ಫೆ,05-ಮೈಸೂರು ಹತ್ತಿರದ ಶ್ರೀ ಸುತ್ತೂರು ಕ್ಷೇತ್ರದಲ್ಲಿ ಕಾರ್ಯಕ್ರಮವೊಂದನ್ನು ಉದ್ಘಾಟಿಸುವ ವೇಳೆ ಬಲೂನ್‍ಗಳ ಗೊಂಚಲು ಸ್ಪೋಟಗೊಂಡಿತು.

ಸುತ್ತೂರು ಮಠದ ಪೀಠಾಧ್ಯಕ್ಷರಾದ ಶ್ರೀ ದೇಶಿಕೇಂದ್ರ ಸ್ವಾಮಿಗಳು ಕುಸ್ತಿ ಪಂದ್ಯಾವಳಿಯನ್ನು ಉದ್ಘಾಟಿಸುತ್ತಿದ್ದ ವೇಳೆ ಈ ಅನಿರೀಕ್ಷಿತ ಸ್ಪೋಟ ಸಂಭವಿಸಿತು. ಘಟನೆಯಲ್ಲಿ ಶ್ರೀಗಳು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.

ಸ್ಪೋಟ ಸಂಭವಿಸುತ್ತಿದ್ದಂತೆ ಶ್ರೀಗಳ ಬೆಂಬಲಿಗರು ಶ್ರೀಗಳನ್ನು ಸುತ್ತುವರೆದು ಶ್ರೀಗಳನ್ನು ಘಟನೆ ಸ್ಥಳದಿಂದ ಹೊರಗೆ ಕರೆದೋಯ್ದರು. ಮತ್ತು ಇತರರು ಬೆಂಕಿಯನ್ನು ಹಿಡಿಯಲು ಯತ್ನಿಸಿದರು.

ಈ ಘಟನೆಯಲ್ಲಿ ಶ್ರೀಗಳು ಯವುದೇ ಅಪಾಯವಿಲ್ಲದೇ ಪಾರಾದರು ಹಾಗೂ ಘಟನೆಯಲ್ಲಿ ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಈ ಸ್ಪೊಟಕ್ಕೆ ಏನು ಕಾರಣ ಎಂಬುದನ್ನು ತನಿಖೆ ಮಾಡಲಾಗುವುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ