ನಾನು ರಾಜೀನಾಮೆ ನೀಡ್ತೀನಿ ಎಂದಿದ್ದು ನಿಜ… ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದು ಹೀಗೆ?

ಬೆಂಗಳೂರು: ಹೌದು ನಾನು ರಾಜೀನಾಮೆ ನೀಡ್ತೇನಿ ಎಂದಿದ್ದು ನಿಜ ಎಂದು ಸಿಎಂ ಕುಮಾರಸ್ವಾಮಿ ಒಪ್ಪಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೆಲವರು ನನ್ನ ವಿರುದ್ಧ ಮಾತನಾಡಿದ್ದರು. ಹೀಗಾಗಿ ಅನಿವಾರ್ಯವಾಗಿ ನಾನು ಹಾಗೆ ಹೇಳಬೇಕಾಯಿತು.

ನಿನ್ನೆ  ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.  ನಾನು ನಿಮಗೆಲ್ಲ ಹೇಳುತ್ತಿದ್ದೇನೆ. ರಾಜ್ಯದ ಜನ ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ.  ಈ ಹಿನ್ನೆಲೆಯಲ್ಲಿ ಇಂತಹ ಮಾತನ್ನಾಡಬೇಕಾಯಿತು. ಕೆಲವರ ಹೇಳಿಕೆ ನೋವು ತಂದಿದ್ದು ನಿಜ ಎಂದು  ಅವರು ಕಾರ್ಯಕರ್ತರ ಸಭೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಇದೇ ವೇಳೆ ಅವರು, ಪ್ರಧಾನಿ ಹುದ್ದೆಯನ್ನ ಬಿಟ್ಟು ಬಂದ ನಮ್ಮ ಕುಟುಂಬಕ್ಕೆ ಸಿಎಂ ಸ್ಥಾನ ಬಿಟ್ಟುಕೊಡುವುದು ದೊಡ್ಡದೇನಲ್ಲ ಎಂದು ಕಾಂಗ್ರೆಸ್​ ಹಾಗೂ ವಿರೋಧಿಗಳಿಗೆ ಸಿಎಂ ಭರ್ಜರಿ ಟಾಂಗ್​ ಕೊಟ್ಟಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ