ಆಟೋ-ಟ್ಯಾಕ್ಸಿ ಚಾಲಕರು ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿದ ಸಿ.ಎಂ.

ಬೆಂಗಳೂರು, ಜ.29- 2019-20ನೆ ಸಾಲಿನ ಬಜೆಟ್ ಪೂರ್ವಭಾವಿ ಸಿದ್ಧತೆ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಟೋ-ಟ್ಯಾಕ್ಸಿ ಚಾಲಕರು ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಮುಂದಿನ ಬಜೆಟ್ ಹಿನ್ನೆಲೆಯಲ್ಲಿ ಆಯಾ ಸಂಘಟನೆಗಳ ಪ್ರತಿನಿಧಿಗಳ ಬೇಡಿಕೆ-ಸಲಹೆಗಳನ್ನು ಸಿಎಂ ಆಲಿಸಿದರು.

ಆಟೋ-ಟ್ಯಾಕ್ಸಿ ಚಾಲಕರು, ಓಲಾ-ಊಬರ್ ಚಾಲಕರು, ಸಿದ್ಧ ಉಡುಪು ಕಾರ್ಖಾನೆಗಳ ನೌಕರರು ಮತ್ತು ಮಾಲೀಕರು, ಅಸಂಘಟಿತ ಕಾರ್ಮಿಕ ಸಂಘ, ಕೊಳಗೇರಿ ನಿವಾಸಿಗಳ ಸಂಘ, ಖಾಸಗಿ ಭದ್ರತಾ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಅವರವರ ಸಂಘಟನೆಗಳ ಬೇಡಿಕೆ, ಸಲಹೆಗಳನ್ನು ಪರಿಶೀಲಿಸಿ ಬಜೆಟ್‍ನಲ್ಲಿ ಅದಕ್ಕೆ ಆದ್ಯತೆ ನೀಡಲು ಚರ್ಚೆ ನಡೆಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ