ಶ್ರೀಗಳ ಲಿಂಗೈಕ್ಯಕ್ಕೆ ಸಂತಾಪ ಸೂಚಿಸಿದ ಶ್ರೀ ಯದುಗಿರಿ ಯತಿರಾಜ ಜೀಯರ್ ಸ್ವಾಮಿಗಳು

ಬೆಂಗಳೂರು, ಜ.22- ಕೋಟಿ ಕೋಟಿ ಜನ ಮಾನಸದಲ್ಲಿ ಆವರಿಸಿರುವ ಸಿದ್ದಗಂಗಾ ಶ್ರೀಗಳ ಲಿಂಗೈಕ್ಯದಿಂದ ಎಲ್ಲರಲ್ಲೂ ಅನಾಥ ಪ್ರಜ್ಞೆಕವಿದಿದೆ ಎಂದು ಶ್ರೀ ಯದುಗಿರಿ ಯತಿರಾಜಮಠದ ಮುಖ್ಯಸ್ಥರಾದ ಶ್ರೀ ಯದುಗಿರಿ ಯತಿರಾಜ ಜೀಯರ್ ಸ್ವಾಮಿಗಳು ಸಂತಾಪ ಸೂಚಿಸಿದ್ದಾರೆ.

ಸಿದ್ದಗಂಗೆಯ ಸಿದ್ಧಪುರುಷರಾಗಿದ್ದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳು ತಮ್ಮ ಸಾರ್ಥಕ ಬದುಕಿಗೆ ವಿದಾಯ ಹೇಳಿ ಶಿವೈಕ್ಯರಾಗಿದ್ದಾರೆ.ಶ್ರೀಗಳ ದೀರ್ಘ ಪವಿತ್ರ ಜೀವನ ಎಲ್ಲಾ ಸಾಧುಸಂತರಿಗೂ ಮಾರ್ಗದರ್ಶನ ಎಂದು ಅವರು ಸಂತಾಪ ಸೂಚಕದಲ್ಲಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ