ಅನೇಕ ಸ್ವಾರಸ್ಯಕರ ಸಂಗತಿಗಳಿಗೆ ಸಾಕ್ಷಿಯಾದ ಕುಂಭಮೇಳ

ಪ್ರಯಾಂಗ್‍ರಾಜ್, ಜ.20- ಉತ್ತರ ಪ್ರದೇಶದ ಅಲಹಾಬಾದ್‍ನ ಪ್ರಯಾಗ್‍ರಾಜ್‍ನಲ್ಲಿ ನಡೆಯುತ್ತಿರುವ ವಿಶ್ವದ ಬೃಹತ್‍ಧಾರ್ಮಿಕ ಸಮಾವೇಶ ಕುಂಭಮೇಳ ಅನೇಕ ಸ್ವಾರಸ್ಯಕರ ಸಂಗತಿಗಳಿಗೂ ಸಾಕ್ಷಿಯಾಗಿದೆ.

ಸಾಧು ಸಂತರಿಗೆ ಅನುಚಿತ ಪ್ರಶ್ನೆಗಳನ್ನು ಕೇಳಬಾರದೆಂಬ ನಂಬಿಕೆ ಇದೆ.ಆದರೆ ಅದರಲ್ಲಿಯೂ ಕಟ್ಟಾ ಸಂಪ್ರದಾಯಸ್ತ ನಾಗಾಸಾಧುಗಳ ಬಳಿ ಮಾತನಾಡುವಾಗ ತುಂಬಾ ಎಚ್ಚರಿಕೆ ಯಿಂದ ಇರಬೇಕು.

ಆದರೆ, ಇಲ್ಲೊಬ್ಬ ಪತ್ರಕರ್ತೆ ಸಾಮಾನ್ಯರಿಗೆ ಪ್ರಶ್ನೆ ಕೇಳುವ ರೀತಿಯಲ್ಲಿ ನಾಗಾಸಾಧುವಿಗೂ ಕೇಳಿ ಇರಿಸುಮುರಿಸಾಗುವಂತಹ ಪ್ರತ್ಯುತ್ತರ ಪಡೆದು ಪೇಚಿಗೆ ಸಿಲುಕಿದ್ದಾರೆ.

ಸಾಮಾನ್ಯವಾಗಿ ನಾಗಾ ಸಾಧುಗಳು ಯಾವುದೇ ವಸ್ತ್ರಧರಿಸುವುದಿಲ್ಲ, ಕೇವಲ ಭಸ್ಮಧಾರಣೆ ಮಾಡಿಕೊಳ್ಳುತ್ತಾರೆ. ಆದರೆ, ಕುಂಭಮೇಳಕ್ಕೆ ಆಗಮಿಸಿದ್ದ ನಾಗಾಸಾಧು ಒಬ್ಬರು ವಸ್ತ್ರ ಧರಿಸಿ ನಡೆಯುತ್ತಿದ್ದರು. ಈ ವೇಳೆ ಎದುರಾದ ಪತ್ರಕರ್ತೆಯೊಬ್ಬರು ನಾಗಾಸಾಧುವನ್ನು ಸಂದರ್ಶಿಸಲು ಯತ್ನಿಸಿದರು.ಆದರೆ ಅದೇ ಸಮಯದಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆಯಿತು.ನಾಗಾಸಾಧುವನ್ನು ಬಟ್ಟೆ ಧರಿಸಿಕೊಂಡಿರುವುದರ ಬಗ್ಗೆ ಪ್ರಶ್ನಿಸಿದ್ದಾರೆ.

ನಿಮ್ಮದು 12 ವರ್ಷಗಳ ಸಂಕಲ್ಪಎನ್ನುತ್ತೀರಿ, ಆದರೆ, ಕೆಲವು ಸಾಧುಗಳು ಬಟ್ಟೆಧರಿಸುವುದಿಲ್ಲ. ಆದರೆ, ನೀವು ಬಟ್ಟೆ ಧರಿಸಿದ್ದೀರಿ ಎಂದು ಹೇಳಿ ಮುಗಿಸುವ ಮುನ್ನವೇ ನಾಗಾಸಾಧು ಧರಿಸಿದ್ದ ವಸ್ತ್ರವನ್ನು ಕಳಚಿದ್ದಾರೆ. ಪತ್ರಕರ್ತೆ ನಾಗಾಸಾಧು ನೀಡಿದ ಪ್ರತಿಕ್ರಿಯೆಗೆಅಲ್ಲಿಂದಜಾಗ ಖಾಲಿ ಮಾಡಬೇಕಾಯಿತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‍ಆಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ